
ಹಾಸನ : ಮಲೆನಾಡು ಇಂಜಿನಿಯರಿಂಗ್ ಕಾಲೇಜನ ಅಲ್ಯೂಮಿನಿ ಹಾಲ್ ನಲ್ಲಿ ದಿನಾಂಕ 29-10-2025 ರಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆಯ ವತಿಯಿಂದ ಜಾಗೃತಿ ಅರಿವು ಸಪ್ತಾಹ – 2025 ತಿಳಿವಳಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉಧ್ಘಾಟನೆ ನೇರವೇರಿಸಿ ಮಾತಾನಾಡಿದ ಹಾಸನ ಲೋಕಾಯುಕ್ತ ಪೊಲೀಸ್ ಠಾಣೆ ಡಿ ವ್ಯೆ ಎಸ್ ಪಿ ಇನ್ಸಪೇಕ್ಟರ್ ಸುರೇಶ್ ಮಾತಾನಾಡಿ ಭ್ರಷ್ಟಾಚಾರ ತಡೆಯಲು ತೇಗೆದುಕೊಳ್ಳ ಬೇಕಾದ ಕ್ರಮದ ಬಗ್ಗೆ ಉಧಾಹರಣೆ ನಿಡುವ ಮೂಲಕ ಮಾಹಿತಿ ನಿಡಿದರು
1984 ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆ ಪ್ರಾರಂಭಗೊಂಡು ರಾಜ್ಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಯಾವುದೆ ಲಂಚವನ್ನು ಪಡೆಯದೆ ಕೆಲಸ ನಿರ್ವಹಿಸುವುದು ಎಲ್ಲಾ ಅಧೀಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಲಂಚ ಮತ್ತು ಮೋಸ ಮಾಡಬಾರದು. ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸಬೇಕು ಎಂದರು
ದೇಶಾಭಿಮಾನ ಭಾಷಭೀನ ಬೇಕು ಲಂಚ ನಿರ್ಮೂಲನೆ ಮಾಡುವುದೆ ಲೋಕಾಯುಕ್ತದ ಗುರಿಯಾಗಿದೆ. ಅಸೆ ದುರಾಸೆ ಗಳಿಗೆ ಒಳಗಾಗಬೇಡಿ ಎಂದು ತಿಳಿಸಿದರು.
ಲಂಚ ಭ್ರಷ್ಟಾಚಾರ ಮಾಡುವವರ ಬಗ್ಗೆ ಮಾಹಿತಿ ನಿಡಿ ಎಂದರು ಅಂಥವರ ಬಗ್ಗೆ ಕ್ರಮ ಕ್ಯೆಗೋಳ್ಳಲಾಗುವುದು ಹಾಗು ಅವರ ಮೇಲೆ ಶಿಸ್ತು ಜರುಗಿಸಲಾಗುವುದು,ಮತ್ತು ಕಠಿಣ ಶಿಕ್ಷೆ ಕೋಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಮೊದಲು ಲಂಚ ಸ್ವೀಕರಿಸಬಾರದೆಂದು ಪ್ರತೀಜ್ನಾವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ಇಂಜಿನಿಯರಿಂಗ್ ಕಾಲೇಜು ಇನ್ ಚಾರ್ಜ್ ಪ್ರಾಂಶುಪಾಲರಾದ ಡಾ. ಹೆಚ್. ಎನ್. ನರಸಿಂಹನ್ ವಹಿಸಿದ್ದರು ವಿದ್ಯಾರ್ಥಿ ಕ್ಷೇಮಧೀಕಾರಿ ಡಾ. ಇಂದೀರಾಬಹೂದ್ದೂರು, ಕಾಲೇಜು ಎನ್. ಎಸ್. ಎಸ್. ಅಧೀಕಾರಿ ಡಾ. ವಿಜಯ್ ಕುಮಾರ್ ತೀಲೆ, ಕಾಲೇಜುನ ರಿಜಿಸ್ಟ್ರಾರ್ ಕುಮುದ ಮತ್ತೀತರರು ಉಪಸ್ಥಿತರಿದ್ದರು.




