
ಸಕಲೇಶಪುರ: ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋ ಹತ್ಯೆ ಮತ್ತು ಗೋಮಾಂಸ ವ್ಯಾಪಾರ ವ್ಯಾಪಕವಾಗಿ ನಡೆಯುತ್ತಿದೆ.ಪಟ್ಟಣದಲ್ಲಿ ಗೋವುಗಳ ಕಳ್ಳತನ ಪ್ರಕರಣಗಳು ಕೇಳಿ ಬರುತ್ತಿದೆ.
ಗೋವು ಕಳ್ಳತನ ಮಾಡಿ ನಂತರ ಹತ್ಯೆಮಾಡಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪಟ್ಟಣದಲ್ಲಿ ಸುಮಾರು 6 ಪ್ರದೇಶಗಳಲ್ಲಿ ಗೋಮಾಂಸ ದಂದೆ ನಡೆಯುತ್ತದೆ. ಹೋಂ ಡಿಲವರಿ ಮೂಲಕ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ಕೆಲವರು ರಾಜರೋಶವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇದವಿದೆ. ಕಠಿಣ ಕಾನೂನುಗಳಿವೆ. ಅನೇಕರ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಅನ್ವಯ ಕೇಸು ದಾಖಲಿಸಲಾಗಿದೆ.
ಕೆಲವರಿಗೆ ಗಡಿಪಾರು ಸಹ ಮಾಡಲಾಗಿದೆ. ಆದರೂ ಸಹ ಗೋಹತ್ಯೆ ನಿಲ್ಲುತ್ತಿಲ್ಲ. ಇದು ಪೋಲಿಸರಿಗೆ ತಲೆ ನೊವಾಗಿದೆ. ಗೋವುಗಳ ಹತ್ಯೆ ಮತ್ತು ಗೋಮಾಂಸ ದೆಂದೆಯಿಂದ ತಾಲ್ಲೂಕಿನ ಶಾಂತಿಯುತ ಪರಿಸರಕ್ಕೆ ದಕ್ಕೆ ಯಾಗುವ ಸಬಂಬವವಿದೆ. ಈ ಕೋಡಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
