
.ಸಕಲೇಶಪುರ.ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯನಿರತರ ಪತ್ರಕರ್ತರ ಸಂಘ , ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ ಸಂಸ್ಥೆ ಗಳ ಆಶ್ರಯದಲ್ಲಿ ಪತ್ರಕರ್ತ, ಸಾಹಿತಿ ಮಲ್ನಾಡ್ ಮೆಹಬೂಬ್ ಅವರ 5ನೇ ಪುಸ್ತಕ ನೀ ನಿಲ್ಲದ ಈ ಜಗತ್ತು ಹೇಗಿರುತ್ತಿತ್ತು ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಡ್ರಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಮ್ ವಿಶ್ವನಾಥ್, ಸಾಹಿತಿಗಳು ಹಾಗೂ ರಂಗಕರ್ಮಿಗಳಾದ ಪ್ರಸಾದ್ ರಕ್ಷಿದಿ, ಕ ಆನೆಮಹಲ್ ಜುಮಾ ಮಸೀದಿ ಧರ್ಮ ಗುರುಗಳಾದ ಇಬ್ರಾಹಿಂ ಕೆ ಮುಸ್ಲಿಯಾರ್, ಹೆಗ್ಗದೆ ಚರ್ಚ್ ನ ಫಾದರ್, ಡಾ. ಫಾದರ್ ಫ್ರಾನ್ಸಿಸ್ ಚಿರಯ್ಕಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಾರದ ಗುರು ಮೂರ್ತಿ,ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್, ಭೀಮ ವಿಜಯ ಪತ್ರಿಕೆಯ ಸಂಪಾದಕರಾದ ನಾಗರಾಜ್ ಹೆತ್ತೂರು,ಸಕಲೇಶಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ಮುಫೀಜ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈ ಭೀಮ್ ಮಂಜು, ಲೇಖಕರಾದ ಯಡೆಹಳ್ಳಿ ಆರ್ ಮಂಜುನಾಥ್, ರೋಟರಿ ಅಧ್ಯಕ್ಷರಾದ ಚಂದ್ರಶೇಖರ್, ಮಹಿಳಾ ಮುಖಂಡರಾದ ಚನ್ನವೇಣಿ ಇದ್ದರು.



