ಸಕಲೇಶಪುರ : ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಷ್ಠಿತ “ಬಸವ ಕಪ್” ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಸಕಲೇಶಪುರದ ಪಂಚಪೀಠ ವಾರಿಯರ್ಸ್ ತಂಡವು ಅಪ್ರತಿಮ ಪ್ರದರ್ಶನ ನೀಡಿ ಮೂರನೇ ಸ್ಥಾನವನ್ನು ಅಲಂಕರಿಸುವ ಮೂಲಕ ತಾಲೂಕಿನ ಕೀರ್ತಿಯನ್ನು ಜಿಲ್ಲಾಮಟ್ಟದಲ್ಲಿ ಉಜ್ವಲಗೊಳಿಸಿದೆ.

ಟೂರ್ನಮೆಂಟ್‌ನುದ್ದಕ್ಕೂ ಅದ್ಭುತ ಕ್ರೀಡಾ ಮನೋಭಾವ, ಕಟ್ಟುನಿಟ್ಟಿನ ಶಿಸ್ತು ಹಾಗೂ ಅದ್ಭುತ ಒಗ್ಗಟ್ಟನ್ನು ಪ್ರದರ್ಶಿಸಿದ ವಾರಿಯರ್ಸ್ ತಂಡವು ಆಕ್ರಮಣಕಾರಿ ಆಟದ ಮೂಲಕ ಪ್ರೇಕ್ಷಕರ ಮನ ಗೆದ್ದಿತು.

ಮೈದಾನದಲ್ಲಿ ತಂಡದ ಆಟಗಾರರು ತೋರಿದ ಚಾಕಚಕ್ಯತೆ ಮತ್ತು ಗೆಲುವಿನ ಹಪಾಹಪಿ, ಪ್ರತಿ ಪಂದ್ಯದಲ್ಲೂ ರೋಚಕತೆಯನ್ನು ಹೆಚ್ಚಿಸಿತ್ತು.ತಂಡದ ನಾಯಕ ಕಾಡುಮಕ್ಕಿ ಹರೀಶ್ ಅವರು ಮಾತನಾಡುತ್ತಾ, ಸಮಾಜದ ಅಭಿವೃದ್ಧಿ ಇರುವುದು ನಮ್ಮೊಳಗಿನ ಒಗ್ಗಟ್ಟಿನಲ್ಲಿ. ನಮ್ಮ ಮುಖ್ಯ ಉದ್ದೇಶ ಕೇವಲ ಪಂದ್ಯ ಗೆಲ್ಲುವುದಲ್ಲ, ಬದಲಾಗಿ ಯುವ ಜನತೆಯಲ್ಲಿ ಕ್ರೀಡಾ ಮನೋಭಾವವನ್ನು ಜಾಗೃತಗೊಳಿಸುವುದು.

ಕ್ರೀಡೆ ಎಂಬುದು ಕೇವಲ ಮನರಂಜನೆಯಲ್ಲ; ಅದು ವ್ಯಕ್ತಿಯಲ್ಲಿ ಶಿಸ್ತು, ಸಹಕಾರ ಮತ್ತು ನಾಯಕತ್ವದ ಗುಣಗಳನ್ನು ರೂಪಿಸುವ ಒಂದು ಶಕ್ತಿಶಾಲಿ ಮಾಧ್ಯಮಲಿಂಗಾಯತ ಸಮುದಾಯದ ಯುವಕರನ್ನು ಒಂದೇ ವೇದಿಕೆಯಡಿ ತರುವ ಆಶಯದೊಂದಿಗೆ ಈ ತಂಡವನ್ನು ಕಟ್ಟಲಾಗಿದೆ ಎಂದು ತಿಳಿಸಿದ ಅವರು, “ನಮ್ಮ ಯುವಕರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಕ್ರೀಡಾ ಚಟುವಟಿಕೆಗಳಿಗೆ ನಿರಂತರವಾಗಿ ಬೆಂಬಲ ಮತ್ತು ಉತ್ತೇಜನ ನೀಡಲಾಗುವುದು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *