
ಸಕಲೇಶಪುರ : ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ದಿಯನ್ನು ಮರೆತು ಧರ್ಮದಂಗಾಲ್ ಮಾಡಲು ವ್ಯವಸ್ಥಿತ ಸಂಚು ಮಾಡಿ ಶಾಲಾ ಕಾಲೇಜು ಗಳಲ್ಲಿ ಹಿಜಾಬ್ ಧರಿಸಬಾರದು ಎಂಬ ಆದೇಶವನ್ನು ಹಿಂಪಡೆದು ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿರುವುದನ್ನು ಮುಸ್ಲಿಂ ತುಷ್ಟೀಕರಣ ಮಾಡಲು ಹೊರಟಿರುವ ಸರ್ಕಾರದ ಇಬ್ಬಾಗ ನೀತಿಯಿಂದ ಮಕ್ಕಳ ಮೇಲೆ ಮತಾಂಧತೆಯ ಪ್ರಭಾವ ಹಾಗೂ ತಾರತಮ್ಯ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ ಎಂದು ಶಾಲಾ ಕಾಲೇಜು ಸಮಯದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬಾರದು ಎಂದು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಸಂಯೋಜಕ್ ಶಿವು ಜಿಪ್ಪಿ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲದಲ್ಲಿ ಪ್ರಕರಣ ವಿಚಾರಣೆಯಲ್ಲಿ ಇದ್ದರು ಸಹ ರಾಜ್ಯಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಕರ್ನಾಟಕ ರಾಜ್ಯ ಸರ್ಕಾರ .ಕರ್ನಾಟಕ ಉಚ್ಛ ನ್ಯಾಯಾಲಯ ಹಿಜಾಬ್ ಮುಸ್ಲಿಂ ಮತದ ಧಾರ್ಮಿಕ ಅಂಗವಲ್ಲ ಎಂದು ಉಲ್ಲೇಖ ಮಾಡಿ ಹಿಜಾಬ್ ವಿದ್ಯಾರ್ಥಿಗಳು ಧರಿಸಲು ಅನುಮತಿ ನಿರಾಕರಿಸಿತ್ತು ಎಂದು ಆರೋಪಿಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವರು ಹೇಳಿಕೆ ನೀಡಿ ಮತ್ತೆ ಧಾರ್ಮಿಕ ದಂಗಾಲ್ ಮಾಡಿಸಲು ವ್ಯವಸ್ಥಿತ ಸಂಚು ರೂಪಿಸಿ ವಿನಾಕಾರಣ ಚರ್ಚೆ ಮತ್ತು ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಬೇಕು ಎಂದು ಮನವಿ ಮಾಡದಿದ್ದರೂ ಸಹ ಸರ್ಕಾರದ ನ್ಯೂನ್ಯತೆಗಳನ್ನು ಒಳ ಜಗಳವನ್ನು ಮುಚ್ವ್ಹಿ ಹಾಕಿಕೊಳ್ಳಲು ಹಿಜಾಬ್ ಅಸ್ತ್ರವನ್ನ ಬಳಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವ್ಯಾಸಂಗದ ಬದಲು ಹಿಜಾಬ್ ವಿಚಾರಕ್ಕೆ ಸಂಘರ್ಷ ಮಾಡಿ ತಮ್ಮ ಭವಿಷ್ಯ ರೂಪಿಸಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ ಎಂದು ಹಿಂದೂ ಮುಖಂಡ ರಘು ಸಕಲೇಶಪುರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಸಕಲೇಶಪುರ ತಾಲ್ಲೂಕಿನ ಪದಾಧಿಕಾರಿಗಳಾದ ನಡಹಳ್ಳಿ ಶಶಿಧರ್. ಪ್ರದೀಪ್ ಪೂಜಾರಿ. ಹರೀಶ್. ಶ್ರೀ ಜಿತ್ ಗೌಡ. ಶೇಖರ್ ಕಬ್ಬಿನಗದ್ದೆ. ರವಿ ಹೆಬ್ಬಸಾಲೆ. ಸುಪ್ರೀತ್ ಇತರರಿದ್ದರು.
