. ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ನಾರಾಯಣ ಹಾಗೂ ಜಲಜ ದಂಪತಿಗಳು ಮತ್ತು ಇವರ ಮಕ್ಕಳು, ಸೊಸೆಯಂದಿರು ಸೇರಿ ಪುಟಾಣಿ ಮಕ್ಕಳಲ್ಲಿ ದೇಶ ಪ್ರೇಮ ಹಾಗೂ ಆದರ್ಶವ್ಯಕ್ತಿಗಳನ್ನು ಪರಿಚಯ ಮಾಡಿಕೊಡುವ ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ, ಡಾ||ಬಿ.ಆರ್ ಅಂಬೇಡ್ಕರ್, ಜವಹರಲಾಲ್ ನೆಹರು, ಭಗತ್ ಸಿಂಗ್, ಭಾರತಾಂಭೆ, ಸರಸ್ವತಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳು ಸೇರಿದಂತೆ ಒಟ್ಟು 8 ಭಾವಚಿತ್ರಗಳನ್ನು ಉಚಿತವಾಗಿ ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಸೈಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಕುಟುಂಬಕ್ಕೆ ಗ್ರಾಮದ ಮಕ್ಕಳ ಭವಿಷ್ಯದ ಮೇಲೆ ಹೊಂದಿರುವ ಕಾಳಜಿಗೆ ಎಲ್ಲರೂ ಅಭಿನಂದಿಸಿದ್ದಾರೆ. ಈ ವೇಳೆ ಗ್ರಾ.ಪಂ ಸದಸ್ಯೆ ಶಶಿ ಕುಮಾರಿ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ಪ್ರಭಾಕರ, ರೂಪಿಣಿ ಮಹೇಶ್, ಶಾಲಾ ಶಿಕ್ಷಕಿ ರಜೀನಾ, ಬಿಸಿಯೂಟ ಸಹಾಯಕಿ ರಶೀ,ಅಂಗನವಾಡಿ ಸಹಾಯಕಿ, ಚಿಣ್ಣರ ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *