
ಸಕಲೇಶಪುರ : ತಾಲ್ಲೂಕಿನ ಯಸಳೂರಿನಲ್ಲಿ ಎಗ್ಗಿಲ್ಲದೆ ಓಡಾಡುವ ಬೀಡಾಡಿ ದನಗಳು, ವಾರಸುದಾರರು ಕಾಯುವ ಹಾಗೂ ಕಟ್ಟುವ ಗೋಜಿಗೆ ಹೋಗದೆ ಬೇಕಾಬಿಟ್ಟಿ ಓಡಿಸುತ್ತಾರೆ.
ಯಸಳೂರು ಗ್ರಾಮಪಂಚಾಯತ್ ಗೆ ಸೇರಿದ ದೊಡ್ಡಿಯೂ ಕಣ್ಮರೆಯಾಗಿದೆ, ಮಳೆಯಿಲ್ಲದೆ ಬೆಳೆಯು ಮಂಕಾಗಿದ್ದು,ಸದ್ಯ ಬೀಡಾಡಿ ದನಗಳು ಅದನ್ನು ಉಳಿಸುತ್ತಿಲ್ಲ, ಕೂಡಲೇ ಗ್ರಾಮಪಂಚಾಯತ್ ಮದ್ಯ ಪ್ರವೇಶಿಸಿ ವಾರಸುದಾರರಿಗೆ ತಿಳಿಯಪಡಿಸುವ ಕೆಲಸ ಮಾಡಬೇಕೆಂದು ಯಸಳೂರು ಸಾಮಾಜಿಕ ಹೋರಾಟಗಾರ ಬೈಲಹಳ್ಳಿ ರವಿತೇಜ್ ಮನವಿ ಮಾಡಿದ್ದಾರೆ.

