
ಸಕಲೇಶಪುರ : ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇತ್ತೀಚಿಗೆ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ವನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಗಂಗಾಧರ್ ಉಧ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಮಲ್ನಾಡ್ ಝಾಕೀರ್, ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಖುಶ್ವಂತ್, ನಜೀಬ್ ಪಾಶ,ಶ್ರೀಧರ ಮೂರ್ತಿ,ಕೃಷ್ಣಯ್ಯ, ಸಿದ್ದೇಶ್,ಉರ್ದು ಶಾಲೆಯ ಮುಖ್ಯೋಪಾಧ್ಯಾಯ ರಾದ ಶಹನಾಝ್ ಭಾನು ಭಾಗವಹಿಸಿದ್ದರು.
ತಾಲೂಕಿನ ವಿವಿಧ ಉರ್ದು ಶಾಲೆಗಳಿಂದ ವಿಧ್ಯಾರ್ಥಿ ಗಳು, ಶಿಕ್ಷಕರು,ಪೋಷಕರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.
