
ಸಕಲೇಶಪುರ : ಈ ಬಾರಿ ಮುಂಗಾರು ಮಳೆ ಅಂದುಕೊಂಡಂತೆ ಬಾರದ ಕಾರಣ ನೀರಿನ ಕೊರತೆ ಎದುರಾಗಿದ್ದು ಈ ವರ್ಷ ತಡವಾಗಿ ಭತ್ತ ನಾಟಿ ಮಾಡಿದ ರೈತರು ಮಳೆಗಾಗಿ ಕಾಯುವ ಪರಿಸ್ಥಿತಿ ಬಂದಿದೆ.
ಸಕಲೇಶಪುರ ಮಲೆನಾಡಿನ ಭಾಗವಾಗಿದ್ದು ರೈತರು ಹಾಗೂ ಕಾಫಿ ಬೆಳೆಗಾರರು ಆತಂಕದಲ್ಲಿ ಇದ್ದಾರೆ ಹಾಗೆ ತಮ್ಮ ಮುಂದಿನ ವ್ಯವಹಾರದ ಬಗ್ಗೆ ಯೋಚಿಸುವ ಸ್ಥಿತಿಗೆ ತಲುಪಿದ್ದಾರೆ.
ಮಳೆ ಇದೇ ರೀತಿ ಕೈಕೊಟ್ಟರೆ ಸಕಲ ಐಶ್ವರ್ಯ ತುಂಬಿದ ಸಕಲೇಶಪುರ ತಾಲ್ಲೂಕು ಬರ ಪೀಡಿತ ತಾಲ್ಲೂಕು ಆಗುವದರಲ್ಲಿ ಸಂದೇಹವವಿಲ್ಲ.
ಎಲ್ಲವನ್ನೂ ಕರುಣಿಸುವ ಸಕಲೇಶ್ವರಸ್ವಾಮಿ ಮಳೆ ಭಾಗ್ಯ ಕರುಣಿಸಿ ರೈತರು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ದೇವರಲ್ಲಿ ಕೇಳಿಕೊಳ್ಳಣ…….


