
ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಿದು. ಡಾ. ರಾಧಾಕೃಷ್ಣನ್ ಅವರು `ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳಾಗಿರಬೇಕು’ ಎಂದು ನಂಬಿದ್ದರು. ಇದೇ ಕಾರಣದಿಂದ ಅವರ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಮ್ಮೆಲ್ಲರ ಯಶಸ್ವಿ ಜೀವನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಗುರುಗಳಿಗೆ ನಮನ ಸಲ್ಲಿಸಲು ಶಿಕ್ಷಕರ ದಿನಾಚರಣೆಯು ಒಂದು ಅತ್ಯುತ್ತಮ ದಿನವಾಗಿದೆ.
ನಮ್ಮ ಜೀವನದಲ್ಲಿ ಶಿಕ್ಷಕರು ಬಹಳ ಮುಖ್ಯ. ಅವರು ಕೇವಲ ಪುಸ್ತಕಗಳಿಂದ ನಮಗೆ ವಿಷಯವನ್ನು ಕಲಿಸುವುದಿಲ್ಲ. ಪ್ರಮುಖ ಕೌಶಲ್ಯಗಳನ್ನು ಕಲಿಯಲು ನಮಗೆ ಸಹಾಯ ಮಾಡುತ್ತಾರೆ. ಅವರು ಹೇಗೆ ಬಲಶಾಲಿಯಾಗಬೇಕು ಮತ್ತು ಇತರರನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ತೋರಿಸುತ್ತಾರೆ.
ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ಪ್ರಮುಖ ಪಾತ್ರವನ್ನು ಗೌರವಿಸಲು ಮತ್ತು ಪ್ರಶಂಸಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಧನ್ಯವಾದ ಹೇಳುವ ದಿನವಿದು.
ಭಾರತದಲ್ಲಿ ಹೆಸರಾಂತ ಶಿಕ್ಷಣತಜ್ಞ ಮತ್ತು ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ.
ವ್ಯಕ್ತಿಯ ಬದುಕಿನಲ್ಲಿ ಮುಂದೆ ಗುರು ಇರಬೇಕು, ಹಿಂದೆ ಗುರು ಇರಬೇಕು, ಆದರೆ ಮಾತ್ರ ಒಳಿತಾಗುವುದು ಶಿಕ್ಷಕರ ದಿನಾಚರಣೆಯ ಶುಭಾಶಯಗಳು

