
ಸಕಲೇಶಪುರ : ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಸ್ತೆ ಮಠ ಸಾಗರದಿಂದ 2.75 ಕಿ.ಮಿ ದೂರವನ್ನು 2ಕೋಟಿ 66ಲಕ್ಷ ವೆಚ್ಚದಲ್ಲಿ ನಿರ್ಮಣ ವಾಗಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮಳಲಿ ಗ್ರಾ.ಪಂ ಸದಸ್ಯೆ ಅಣ್ಣಮ್ಮ, ಬಿಜೆಪಿ ಮುಖಂಡರುಗಳಾದ ಕೊಲ್ಲಹಳ್ಳಿ ಬಾಲರಾಜ್, ಸತೀಶ್ ಮಠಸಾಗರ, ಸದಾಶಿವ, ವೆಂಕಟೇಶ್, ರಘು ಚಂಪಕನಗರ ಸೇರಿದಂತೆ ಇತರರು ಹಾಜರಿದ್ದರು.





