
ಹಾಸನ :-ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಸದೆ ತಾರತಮ್ಯ ಮಾಡುತ್ತಿರುವ ರಾಜ್ಯಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲಾ ಅಧ್ಯಕ್ಷರಾದ ಸಿ ಡಿ ಮನುಕುಮಾರ್ ರವರ ನೇತೃತ್ವದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಇಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು .
ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಉಪಾಧ್ಯಕ್ಷರಾದ ಸೀತಾರಾಂ ಬೋರೆಗೌಡ, ತುಳಸಿ ಗೌಡ , ಶ್ರೀನಿವಾಸ್ ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾದ್ಯಕ್ಷರಾದ ಗಣೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಜಿಲ್ಲಾ ಮಹಿಳಾ ಅಧ್ಯಕ್ಷರಾದ ರೇಖಾ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಯುವ ಘಟಕದ ಅಧ್ಯಕ್ಷರಾದ ದೇವಿಕಾ ಮಧು, ಬೇಲೂರು ತಾಲ್ಲೂಕಿನ ಕರವೇ ಅಧ್ಯಕ್ಷರಾದ ಚಂದ್ರು, ಆಲೂರು ತಾಲ್ಲೂಕಿನ ಅಧ್ಯಕ್ಷರಾದ ನಟರಾಜ್, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಮಧು ,ಹೊಳೆನರಸೀಪುರ ತಾಲ್ಲೂಕಿನ ಕರವೇ ಅಧ್ಯಕ್ಷರಾದ ಓಹಿಲೇಶ್, ಅರಸಿಕೇರೆ ತಾಲ್ಲೂಕಿನ ಕರವೇ ಅಧ್ಯಕ್ಷರಾದ ಹೇಮಂತ್, ಹಾಸನ ತಾಲೂಕಿನ ಕರವೇ ಅಧ್ಯಕ್ಷರಾದ ಶಿವಣ್ಣ ಗೌಡ ಹಾಗೂ ಹಾಸನ ಜಿಲ್ಲೆಯ ಸಮಸ್ತ ಕರವೇ ಕಾರ್ಯಕರ್ತರು ಬಾಗವಹಿಸಿದ್ದಾರೆ.



