
*ಅಜಾತಶತೃವಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ* ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಕಲಾವಿದ, ಹವ್ಯಾಸೀ ನಿರೂಪಕ, ನಿರರ್ಗಳ ಮಾತುಗಾರ, ಸಮಾಜಸೇವಕ, ಅತ್ಯುತ್ತಮ ವಿದ್ಯಾರ್ಥಿ… ಇದೆಲ್ಲಾ ಯಾರಪ್ಪಾ.. ಅಪರೂಪದ ವ್ಯಕ್ತಿತ್ವ ಎಂದಿರಾ..?
ನಮ್ಮ ನಡುವೆಯೇ ಇದ್ದು, ಬೆಳೆದು, ಹಲವರನ್ನು ಬೆಳೆಸಿ, ತನ್ನ ಗುರುವಿಗೇ ಗುರುವಾದ ಅಪ್ರತಿಮ ಸಾಧಕ * ಹೆಚ್ ಡಿ ಸೋಮೇಶ್* ಇವರಿಗೆ ಈ ವರ್ಷದ *ಹಾಸನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ* ಜಾನಪದ ವಿಭಾಗದಲ್ಲಿ ಬಂದಿರುವುದು ನಮಗೆಲ್ಲಾ ಅತ್ಯಂತ ಸಂತಸ ತಂದ ವಿಚಾರವಾಗಿದೆ.
ಶ್ರೀಯುತರಿಗೆ ಶುಭಾಶಯಗಳು ಹಾಗೂ ಅಭಿನಂದನೆಗಳು. ಹಾಸನ ಜಿಲ್ಲೆ ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಸ ಹಿ ಪ್ರಾ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲಾವಿದರಾಗಿ ಪ್ರದರ್ಶನ ನೀಡಿ ಬೆನ್ನು ತಟ್ಟಿಸಿಕೊಂಡವರು; ಹಾಡುಗಾರ, ಜಾನಪದನೃತ್ಯದಲ್ಲಿ ವಿಶೇಷ ಪರಿಣತಿ, ಹಲವಾರು ಪ್ರಶಸ್ತಿ, ಗೌರವಗಳಿಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಭಾಜನರಾಗಿದ್ದಾರೆ. ಇಂತಹವರು ಪ್ರಶಸ್ತಿಗೆ ನಿಜವಾಗಿಯೂ ಅರ್ಹರೆಂಬುದರಲ್ಲಿ ಎರಡು ಮಾತಿಲ್ಲ. ಪ್ರಶಸ್ತಿಗೆ ಆಯ್ಕೆ ಮಾಡಿರುವ ಜಿಲ್ಲಾಡಳಿತ ಕೂಡ ಅಭಿನಂದನಾರ್ಹ..
