
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಕರಡಿಗಾಲದಲ್ಲಿ ಆನೆಗಳ ದಾಂದಲೆ ಮುಂದುವರೆದಿದೆ.
ಇನ್ನು ಕೇವಲ 20 ದಿನಗಳಲ್ಲಿ ಕಟಾವಿಗೆ ಬರಬೇಕಾಗಿದ್ದ ಮದನ್ ಕರಡಿಗಾಲ ಎಂಬುವವರ ಭತ್ತದ ಬೆಳೆಯನ್ನು ಕಾಡಾನೆಗಳು ಸಂಪೂರ್ಣ ನಾಶ ಮಾಡಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಕಾಡಾನೆಗಳ ದಾಂದಲೆ ಯಿಂದ ಮೋಟಾರ್ ಗೆ ನಿರ್ಮಾಣ ಮಾಡಿದ ಸೆಡ್ ಧ್ವಂಸ ಮಾಡಿ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿರುತ್ತವೆ.
ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕಾಗಿ ರೈತರಾದ ಕರಡಿಗಾಲ ಮದನ್ ಮನವಿ ಮಾಡಿದ್ದಾರೆ.





