
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ದೇವಲಕೆರೆಯ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸುತ್ತ ಮುತ್ತ ಸ್ವಚ್ಚತೆಯನ್ನು ಧರ್ಮಸ್ಥಳ ಶೌರ್ಯ ತಂಡ ದೇವಲಕೆರೆ ಘಟಕದವತಿಂದ ಮಾಡಲಾಯಿತು.
ಈ ಶೌರ್ಯ ಘಟಕದ ಸಂಯೋಜಕರಾದ ಪ್ರಸನ್ನ ಕುಮಾರ್, ನಿವೃತ್ತ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಊರಿನ ಕಮಿಟಿಯ ಲಕ್ಷ್ಮಣ್ ಗೌಡ್ರು ಹಾಗೂ ಸ್ವಯಂ ಸೇವಕರಾದ ಮಹೇಶ್, ಕಿರಣ್ ,ಅಕ್ಷಯ್, ಸುರೇಶ್, ರಾಕೇಶ್ ನಿಖಿಲ್ ,ಸಂದೀಪ್ ,ಘಟಕದ ಪ್ರತಿನಿಧಿಯಾದ ಭವ್ಯ, ಸೇವ ಪ್ರತಿನಿಧಿ ಶೋಭಾ ಹಾಗೂ ಗ್ರಾಮಸ್ಥರಾದ ಅಕ್ಷಿತಾ ಭಾಗವಹಿಸಿ ಸೇವಾ ಸಲ್ಲಿಸಿದರು.



