
ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಕಾಡಾನೆಗಳನ್ನು ಸೆರೆಹಿಡಿಯಲು ಕಾರ್ಯಚರಣೆ ವೇಳೆ ಸೋಮವಾರ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆ ಸಾವಿಗೆ ಡಿ.ಎಫ್.ಓ. ಮತ್ತು ಎ.ಸಿ.ಎಫ್ ಇವರು ಪೂರ್ವ ಸಿದ್ಧತೆ ಇಲ್ಲದೆ ಹಾಗೂ ವ್ಯವಸ್ಥಿತವಾಗಿ ಕಾರ್ಯಚರಣೆ ಮಾಡಲು ಕೆಳಹಂತದ ಸಿಬ್ಬಂದಿಗಳನ್ನು ಸಲಹೆ ಸೂಚನೆಗಳನ್ನು ನೀಡದೇ ಇದ್ದುದರಿಂದ
8 ಬಾರಿ ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಇಡೀ ರಾಜ್ಯದ, ದೇಶದ ಆಕರ್ಷಣೀಯವಾಗಿ ಗಮನ ಸೆಳೆದಿದ್ದ ಅರ್ಜುನನ ಸಾವಿಗೆ ಕಾಡಾನೆ ಸೆರೆ ಹಿಡಿಯಲು ಕರೆತಂದು ಅದಕ್ಕೆ ರಕ್ಷಣೆ ಹಾಗೂ ಭದ್ರತೆಯನ್ನು ಮತ್ತು ಕಾರ್ಯಚರಣೆಯನ್ನು ವ್ಯವಸ್ಥಿತವಾಗಿ ನಡೆಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ಅರ್ಜುನನ ಸಾವಿಗೆ ಇವರೇ ಡಿ.ಎಫ್.ಓ. ಮೋಹನ್ ಕುಮಾರ್ ಹಾಗೂ ಎ.ಸಿ.ಎಫ್ ಮಹದೇವವರೇ ನೇರ ಕಾರಣರಾಗಿದ್ದಾರೆ ಎಂದು ಡಿ.ಸಿ.ಸಣ್ಣಸ್ವಾಮಿ ಅವರು ಆರೋಪಿಸಿದ್ದಾರೆ.

