
ಸಕಲೇಶಪುರ : ತಾಲೂಕಿನ ಬೀರಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿರಡಹಳ್ಳಿ ಗ್ರಾಮದ ಸರ್ವೇ ನಂಬರ್ 150 ರಲ್ಲಿ 13 ಕುಂಟೆ ಸರ್ಕಾರಿ ಗೋಮಾಳ ಜಾಗ ಖಾಲಿ ಇದ್ದು, Dll ಬಿ ಆರ್ ಅಂಬೇಡ್ಕರ್ ಸಮುದಾಯ ಭವನಕ್ಕೆ ನಿರ್ಮಾಣಕ್ಕೆ, ಇಂದು ಗ್ರಾಮ ಲೆಕ್ಕಾಧಿಕಾರಿ, RI, ಸಮ್ಮುಖದಲ್ಲಿ ಸರ್ವೇ ಮಾಡಲಾಯಿತು,
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕರು, ಗ್ರಾಮಸ್ಥರು, ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಿನ ದಲಿತ ಮುಖಂಡರು, ಗ್ರಾಮ ಲೆಕ್ಕಾಧಿಕಾರಿ,ಸರ್ವೆ ಇಲಾಖೆ ಅಧಿಕಾರಿಗಳು, ತಾಲೂಕಿನ ದಲಿತ ಮುಖಂಡರುಗಳಾದ ನಲುಲ್ಲಿ ಈರಪ್ಪ, ಲಕ್ಷ್ಮಣ್ ಕೀರ್ತಿ, ಮಂಜು ಯಸಳೂರು, ಪ್ರಶಾಂತ ಕಲ್ಗಣೆ, ಗಂಗಾಧರ್ ಬೆಳಗೋಡು, ರವೀಶ್, ಇತರರು ಹಾಜರಿದ್ದರು.




