
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಸಿರಿಧಾನ್ಯಗಳ ಮಹತ್ವ ಮತ್ತು ಮೌಲ್ಯವರ್ಧಿತ ಉತ್ಪನ್ನಗಳುʼ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಬನು ದೇಶಪಾಂಡೆ ರವರು ಆಗಮಿಸಿದ್ದರು.
ಸಿರಿಧಾನ್ಯಗಳಾದ-ರಾಗಿ, ಬರಗು,ಸಜ್ಜೆ,ಜೋಳ, ನವಣೆ,ಹಾರಕ, ಸಾಮೆ,ಊದಲ ಕೊರಲೆ ಹಾಗೂ ಇವುಗಳ ಮಹತ್ವ -ಪೋಷಕಾಂಶಗಳ ಕಣಜ.ಕಬ್ಬಿಣಾಂಶ, ಮೆಗ್ನೀಶಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಷಿಯಂ ಹಾಗೂ ಪೊಟ್ಯಾಷಿಯಂ ಅಂಶಗಳು ಹೇರಳವಾಗಿದೆ. ಪ್ರೋಟೀನ್, ನಾರಿನಾಂಶ, ಬಿ ಗುಂಪಿನ ಜೀವಸತ್ವಗಳ ಕಣಜವಾಗಿದೆ.
ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳು, ಸಿರಿಧಾನ್ಯಗಳ ಬಳಕೆ ವಿಧಾನ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳಾದ – ನವಣೆ ಚಕ್ಲಿ, ಸಿರಿಧಾನ್ಯ ಬಿಸ್ಕೆಟ್ ತಯಾರಿಕೆ ಬಗ್ಗೆ ವಿದ್ಯಾರ್ಥಿನಿಯಾದ ರಜನಿ.ಎನ್ ಅವರು ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಜನರೊಂದಿಗೆ ಚರ್ಚೆಯನ್ನು ನಡೆಸಿ ಸಿರಿಧಾನ್ಯಗಳ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಅದರ ಮಹತ್ವವನ್ನು ತಿಳಿಸಿದರು.
