ಆಲೂರು :2024 ನೇ ಸಾಲಿನ ಟ್ರೋಫಿ ಫೈಟರ್ಸ್ ಬೆಳ್ಳಾವರ ವತಿಯಿಂದ ಆಯೋಜಿಸಿದ್ದ ಜೈ ಭೀಮ್ ಕಪ್ ಕ್ರಿಕೆಟ್ ಪಂದ್ಯಾವಳಿ ಸುಸಜ್ಜಿತವಾಗಿ ನಡೆಯಿತು,,ಶನಿವಾರ ಮತ್ತು ಭಾನುವಾರ ಎರಡು ದಿನಗಳ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಬೆಳ್ಳಾವರ ಗ್ರಾಮದಲ್ಲಿ ನಡೆಯಿತು

ಈ ಕ್ರೀಡಾಕೂಟಕ್ಕೆ ಸುಮಾರು 25 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ತೀವ್ರ ಹಣಾಹಣಿಯಲ್ಲಿ ಉದೇವಾರ ತಂಡ 20.000 ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡಿತು ಮತ್ತು ದ್ವಿತೀಯ ಬಹುಮಾನ 10,000 ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ಹಾಸನ ತಂಡ ಪಡೆದು ಹೊರಹೊಮ್ಮಿತು,

ಇದರಲ್ಲಿ ಅತ್ಯುತ್ತಮ ಬೌಲರ್ ಆಗಿ ಉದೇವಾರ ತಂಡದ ಆಟಗಾರ ಶೈಲೇಶ್ ಪಡೆದುಕೊಂಡರು, ಹಾಗೂ ಅತ್ಯುತ್ತಮ ಬ್ಯಾಟ್ಸಮನ್ ಆಗಿ ಕಿರಣ್ ಪಡೆದುಕೊಂಡು ತಂಡದ ಆಟಗಾರರು ಟ್ರೋಫಿ ಪಡೆದು ಸಂತಸ ವ್ಯಕ್ತ ಪಡಿಸಿದರು,

ಈ ಸಂದರ್ಭದಲ್ಲಿ ಉದೇವಾರ ತಂಡದ ಆಟಗಾರರಾದ, ರಾಕಿ, ರವಿ, ಕಿರಣ್, ಆಸೀಫ್, ಬಾಲು, ಸುನೀಲ್ ಶೈಲೇಶ್,ನಾಗೇಶ್, ವಸಂತ, ಕಿರಣ್ ಅಖಿಲೇಶ್ ಹಾಗೂ ತಂಡದ ಆಟಗಾರರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *