
ವಿಶ್ವದ ಎದುರು ಬಾಲರಾಮನ ಮೂರ್ತಿಯ ಅನಾವರಣ ಮಾಡಲಾಗಿದೆ. ಈಗಾಗಲೇ ಪುರಪ್ರವೇಶವಾಗಿದ್ದು, ಮೊನ್ನೆ ಗರ್ಭಗುಡಿಗೆ ವಿಗ್ರಹ ಪವೇಶ ಮಾಡಿದೆ. ನಿನ್ನೆ ರಾಮಲಲ್ಲಾ ಬಾಲರಾಮ ಫೋಟೋ ಬಿಡುಗಡೆ ಮಾಡಲಾಗಿದೆ.
ಅಯೋಧ್ಯೆ(Ayodhya) ಬಾಲರಾಮನ ವಿಗ್ರಹ ಮಂದಸ್ಮಿತನಾಗಿದ್ದು, ಬಾಲರಾಮನ ಕೊರಳಲ್ಲಿ ಆಭರಣ,ಕೈಯಲ್ಲಿ ಬಿಲ್ಲು-ಬಾಣ ಇದೆ. ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಬಾಲರಾಮನ ಮೂರ್ತಿ ಅರಳಿದೆ. ದಶಾವತಾರಗಳು, ನವಗ್ರಹ, ಹೊಯ್ಸಳ ಶೈಲಿಯ ಕೆತ್ತನೆ ಇಲ್ಲಿದೆ. 300 ಕೋಟಿ ವರ್ಷದ ಕಲ್ಲಿನಲ್ಲಿ ಬಾಲರಾಮ ಮೂಡಿದ್ದಾನೆ. ಸದ್ಯ ಜ.22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ.


