
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಡಹಳ್ಳ ಗ್ರಾಮದ ಪುನೀತ್ ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಕಾರಣ ಪುನೀತ್ ರವರ ಮನೆಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಆದಂತಹ ಮುರಳಿ ಮೋಹನ್ ರವರು ಮತ್ತು ಸಮಾಜ ಸೇವಕರು ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಆದಂತಹ ಬಾಚಿಹಳ್ಳಿ ಪ್ರತಾಪ್ ಗೌಡ ರವರು ಹಾಗೂ ರಾಮಚಂದ್ರರವರು ಮೃತರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನವನ್ನು ತಿಳಿಸಿ ಕುಟುಂಬಸ್ಥರಿಗೆ ಧನ ಸಹಾಯವನ್ನು ನೀಡಿ ಸಂತೈಸಿದರು
ಮೃತರ ಕುಟುಂಬಕ್ಕೆ ಪಡಿತರ ಚೀಟಿಯ ವ್ಯವಸ್ಥೆ ಇಲ್ಲದಿರುವುದು ಕಂಡುಬಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಫೋನಿನ ಮುಖಾಂತರ ಕರೆ ಮಾಡಿ ಪಡಿತರ ಚೀಟಿಯನ್ನು ವಿತರಿಸುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಯುವಕರು ಗ್ರಾಮಸ್ಥರು ಮತ್ತು ಹರ್ಷರವರು ಪ್ರಜ್ವಲ್ ಚಿನ್ನಹಳ್ಳಿ ರವರು ಉಪಸ್ಥಿತರಿದ್ದರು

