
ಸಕಲೇಶಪುರ : ಇತ್ತೀಚೆಗೆ ನಮ್ಮನ್ನು ಅಗಲಿದ ನಾಡು ಕಂಡ ಅಪರೂಪದ ಅಧಿಕಾರಿ ,ಸರಳತೆಗೆ, ಮಾನವೀಯತೆಗೆ ಹೆಸರಾದ ಸಕಲೇಶಪುರ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ ಬೈಕೆರೆ ನಾಗೇಶ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಬೈಕೆರೆ ನಾಗೇಶ್ ಅವರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಶ್ರೀ ಗುರುವೇಗೌಡ ಅವರ ಕಲ್ಯಾಣ ಮಂಟಪದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು, ಮಾಜಿ ಶಾಸಕರುಗಳಾದ ಹೆಚ್ ಕೆ ಕುಮಾರಸ್ವಾಮಿ, ಹೆಚ್ ಎಂ ವಿಶ್ವನಾಥ್, ಬಿ ಆರ್ ಗುರುದೇವ್, ಚಂಚಲಾಕುಮಾರಸ್ವಾಮಿ, ಸುಗುಣಾ ನಾಗೇಶ್ ,ಬಾಳ್ಳು ಜಗನ್ನಾಥ , ಕರ್ನಾಟಕ ಬೆಳೆಗಾರರ ಸಂಘದ ಅದ್ಯಕ್ಷ ಹೆಚ್.ಟಿ.ಮೋಹನ್ ಕುಮಾರ್, ಪುರಸಭಾ ಸದಸ್ಯ ಆದರ್ಶ್ , ಮಲ್ನಾಡ್ ಜಾಕೀರ್, ಹೆಚ್.ಪಿ.ಲಕ್ಕಪ್ಪ ಇತರರು ಪತ್ರಕರ್ತರ ಸಂಘದ ಅದ್ಯಕ್ಷ ಜೈಭೀಮ್ ಮಂಜು, ಎಂ.ಹೆಚ್.ಪ್ರಕಾಶ್ ಹಾಗೂ ತಾಲ್ಲೂಕಿನ ವಿವಿದ ಸಂಘ- ಸಂಸ್ಥೆಗಳ ಮುಖಂಡರು, ವಿವಿದ ಇಲಾಖೆಯ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಪತ್ರಕರ್ತರರು ಇದ್ದರು.





