![](https://tv46malenadudigital.com/wp-content/uploads/2024/05/1000105303-1024x1024.jpg)
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ೯೨ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಗರದ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು ಸಿಹಿ ಹಂಚಿದರು.
ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಆಶೀರ್ವಾದ ಕೇಳುತ್ತಾ, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ದೇವೇಗೌಡರ ಅಭಿಮಾನಿಗಳು ಸೇರಿ ಮಾಜಿ ಪ್ರಧಾನಿಗಳ ೯೨ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಾವೇರಿ, ಗಡಿ ವಿಚಾರ, ಕನ್ನಡ ಪರ ಹೋರಾಟ ಇರಬಹುದು ದೇವೇಗೌಡರು ನಮ್ಮ ರಾಜ್ಯಕ್ಕೆ ಮತ್ತು ರಾಷ್ಟ್ರದಲ್ಲಿ ಸರ್ವ ಪಕ್ಷಗಳಿಗೆ ಸಲಹೆಗಳನ್ನು ಕೊಡುತ್ತಿದ್ದರು. ಭೂಪಟದಲ್ಲಿ ಹಾಸನ ಜಿಲ್ಲೆಯನ್ನು ಗುರುತಿಸುವಂತೆ ಮಾಡಿದವರು ಹೆಚ್.ಡಿ. ದೇವೇಗೌಡರೇ ಕಾರಣ. ಭಗವಂತನು ದೇವೇಗೌಡರಿಗೆ ಆರೋಗ್ಯ, ಆಯಾಸ್ಸು ಕರುಣಿಸಿ ಇನ್ನು ಹಲವಾರು ವರ್ಷಗಳ ಕಾಲ ಇದ್ದು, ನಮಗೆ ಸಲಹೆ ಸೂಚನೆಯನ್ನು ಕೊಡಬೇಕು ಎಂದರು.
ಜೆಡಿಎಸ್ ಪಕ್ಷ ಇನ್ನು ಇದೆ ಎಂದರೇ ದೇವೇಗೌಡರೇ ಕಾರಣ. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆಯನ್ನು ಏರಿ ಅಧಿಕಾರ ಪಡೆದಿದ್ದಾರೆ. ಅವರಿಗೆ ಎಲ್ಲಾರ ಪರವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದಾಗಿ ಹೇಳಿದರು.
ಬೇಲೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ೯೨ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಇಳಿವಯಸ್ಸಿನಲ್ಲೂ ೨೯ರ ಮಾನಸಿಕ ಚಿರ ಯವ್ವನ ಅವರಲ್ಲಿದೆ. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ತಾಲೂಕು ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕಾರಣಕ್ಕೆ ಕಾಲಿಟ್ಟು, ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ, ಪ್ರಧಾನ ಮಂತ್ರಿ ಹುದ್ದೆವರೆಗೂ ಜನರು ಅವಕಾಶ ಕೊಟ್ಟಿದ್ದಾರೆ ಎಂದರು.
ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ಕನ್ನಡಿಗನಾಗಿ ಮೊದಲ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಪ್ರಧಾನಮಂತ್ರಿ ಆದ ವೇಳೆ ಅನೇಕ ಉತ್ತಮ ಜನಪರ ಕಾರ್ಯಕ್ರಮ ಕೈಗೊಂಡಿದ್ದರು. ಕೃಷ್ಣ ಕಾವೇರಿ ಯನ್ನದೇ ನೀರವರಿಗೆ ತೊಡಿಸಿಗಿಕೊಂಡು ಕೇಂದ್ರದ ಅನುಧಾನ ಕೊಡುವ ಮೂಲಕ ರಾಜ್ಯದ ಕೃಷ್ಣ ಬಾಂಡನ್ನು ಕೊಟ್ಟಿರುವುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಯಾವುದೇ ಕಪ್ಪುಚುಕ್ಕಿ ಇಲ್ಲದೇ ೧೧ ತಿಂಗಳ ಆಡಳಿವನ್ನು ಯಶಸ್ವಿಯಾಗಿ ಕೊಟ್ಟಿದ್ದಾರೆ. ಯಾವ ಬುಲೆಟ್ ಪ್ರೂಪ್ ಹಾಕಿಕೊಳ್ಳದೇ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದ್ದಂತಹ ಪಡಿತರ ಪದ್ಧತಿಯನ್ನು ಇಡೀ ಭಾರತ ದೇಶಕ್ಕೆ ವಿಸ್ತರಿಸಿದಂತಹ ಕೀರ್ತಿ ಅವರಿಗೆ ಸಲುತ್ತದೆ. ದೇವೇಗೌಡರ ಮಾರ್ಗದರ್ಶನ ಅತ್ಯವಶ್ಯಕವಾಗಿದ್ದು, ಭಗವಂತ ಹೆಚ್ಚಿನ ಶಕ್ತಿ ನೀಡಿ ಆರೋಗ್ಯ ವೃದ್ಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಇದೆ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಮಾಧ್ಯಮ ವಕ್ತಾರ ಹೊಂಗೆರೆ ರಘು, ಮುಖಂಡರಾದ ಬಿದರಿಕೆರೆ ಜಯರಾಮ್, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ್, ಪ್ರೇಮಮ್ಮ, ದಸ್ತಾಗೀರ್, ಭಾನುಪ್ರಕಾಶ್, ಹೆಚ್.ಬಿ. ಗೋಪಾಲ್ ಇತರರು ಭಾಗವಹಿಸಿದ್ದರು.
![](https://tv46malenadudigital.com/wp-content/uploads/2024/05/1000105299-1024x558.jpg)
![](https://tv46malenadudigital.com/wp-content/uploads/2024/05/1000105298-1024x575.jpg)
![](https://tv46malenadudigital.com/wp-content/uploads/2024/05/1000105301.jpg)