
ಸಕಲೇಶಪುರ : ತಾಲ್ಲೂಕು ಕಾನೂನು ಸೇವಾ ಸಮಿತಿ, ಮತ್ತು ವಕೀಲರ ಸಂಘ, ಸಕಲೇಶಪುರ ಹಾಗೂ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದೊಂದಿಗೆ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ, ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಇಂದು ಸರ್ಕಾರಿ ಬಾಲಕೀಯರ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಕಲೇಶಪುರ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾದ ಸಿ.ಎಂ. ಮೋಹನ್ ಕುಮಾರ್,ಸಿವಿಲ್ ನ್ಯಾಯಾಧೀಶರಾದ ಮಹೇಂದ್ರ ಎಂ,ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮಿನರಸಿಂಹ ಆರ್.ವಿ,ಸಹಾಯಕ ಸರ್ಕಾರಿ ಅಭಿಯೋಜಕರಾದ ಅನ್ವಿತ ವಿ ಅಮಿನ್, ವಕೀಲರ ಸಂಘದ ಅದ್ಯಕ್ಷರಾದ ಪ್ರದೀಪ್, ರಮೇಶ್ ಶಿವಪ್ರಕಾಶ್ ವಕೀಲರಾದ ವೈ.ಡಿ,ಶಾರದ.ಇತರರು ಇದ್ದರು.



