
ಸಕಲೇಶಪುರ ತಾಲ್ಲೂಕು ವರ್ತಕರ ಸಂಘ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ : 7-7-2024ನೇ ಭಾನುವಾರ ಸಂಜೆ : 4-00 ರಿಂದ ನಡೆಯಲಿದ್ದು
ಮೇಲ್ದಂಡ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಪ್ರಯುಕ್ತ ಈ ದಿನ ತಾಲ್ಲೂಕು ವರ್ತಕರ ಸಂಘ ಹಾಗೂ ಜೀವ ರಕ್ಷ ರಕ್ತ ನಿಧಿ, ಹಾಸನ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ ನೆರವೇರಿತು
ತಾಲೂಕು ವರ್ತಕರ ಸಂಘದಿಂದ ಇಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ, ಜೀವರಕ್ಷಾ ರಕ್ತ ಕೇಂದ್ರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ರಕ್ತದಾನ ಮಾಡಲು ಇಚ್ಚಿಸುವವರು ಮಧ್ಯಾಹ್ನ 1:00 ಗಂಟೆಯ ಒಳಗೆ ಬಂದು ರಕ್ತದಾನ ಮಾಡಿ ಸಹಕರಿಸಬೇಕಾಗಿ ವಿನಂತಿ.
ಮಧ್ಯಾಹ್ನ 2-30 ರಿಂದ ಸಂಜೆ 4-00ರ ವರೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಳಾಂಗಣ ಕ್ರೀಡಾ ಚಟುವಟಿಕೆ ಏರ್ಪಡಿಸಲಾಗಿದೆ.
ಎಲ್ಲಾ ಕಾರ್ಯಕ್ರಮಗಳಲ್ಲಿ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಸಕಲೇಶಪುರ ತಾಲ್ಲೂಕು ವರ್ತಕರ ಸಂಘ
ಈ ಕಾರ್ಯಕ್ರಮವನ್ನು : ಶ್ರೀ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

