
ಸಕಲೇಶಪುರ : ಕಳೆದ 9 ವರ್ಷಗಳಿಂದ ಸಕಲೇಶಪುರ ತಾಲೂಕು ಸರ್ವೆ ಇಲಾಖೆಯಲ್ಲಿ ಸರ್ವೆಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೃಂಗೇರಿ ಮೂಲದ ಬೆಂಗಳೂರು ನಿವಾಸಿ ಇಂದು ಬೆಳಗ್ಗೆ ವಾಕಿಂಗ್ ಮುಗಿಸಿ ಮನೆಯ ಮೆಟ್ಟಿಲು ಹತ್ತುವಾಗ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣ ಕ್ರಾಫರ್ಡ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನ ಹೊಂದಿದ್ದು ಮೃತರ ಆತ್ಮಕ್ಕೆ ತಾಲೂಕು ಆಡಳಿತ ,ಸರ್ವೆ ಇಲಾಖೆಯ ಸಿಬ್ಬಂದಿಗಳು ಹಾಗೂ ಶಾಸಕ ಸಿಮೆಂಟ್ ಮಂಜುನಾಥ್ ಸಂತಾಪ ಸೂಚಿಸಿದ್ದಾರೆ.

