
ಸಕಲೇಶಪುರ : ಕಳೆದ ಹಲವಾರು ವರ್ಷಗಳ ಹಿಂದೆ ಮಲೆನಾಡು ಕಬ್ಬಡಿ ತಂಡದಲ್ಲಿ ಉತ್ತಮ ಆಟಗಾರರಾಗಿ ಹಾಗೂ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕಬ್ಬಡಿ ಆಟವಾಡಿದ ಮಾಜಿ ಆಟಗಾರ ,ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಮುಖಂಡರಾಗಿ ಗುರುತಿಸಿಕೊಂಡಿದ್ದ ಸದಾ ಹಸನ್ಮುಖಿಯಾದ ಖಲೀಲ್ ಅವರು ಇಂದು ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ಮೃತರ ಆತ್ಮಕ್ಕೆ ಮಲೆನಾಡು ಕಬ್ಬಡಿ ತಂಡದ ಆಟಗಾರರಾದ ಸ.ಬ ಭಾಸ್ಕರ್, ಸತೀಶ್, ಹಾಲೇಬೇಲೂರು ಕುಮಾರ್ ನಂದಿಕೃಪ ಪ್ರಕಾಶ್, ಸುಬ್ರಹ್ಮಣ್ಯ, ಜಿಂಕೆ ಸುರೇಶ್, ಹೊಂಗಡಹಳ್ಳ ಚಂದ್ರು, ವಕೀಲ ಷಣ್ಮುಖ, ಜೈಭೀಮ್ ಮಂಜು, ಹಾಗೂ ಮಾಜಿ ಶಾಸಕರಾದ ಹೆಚ್.ಎಂ.ವಿಶ್ವನಾಥ್, ಹೆಚ್.ಕೆ.ಕುಮಾರಸ್ವಾಮಿ, ಮಲ್ನಾಡ್ ಮೆಹಬೂಬ್, ಸಯ್ಯದ್ ಮುಫೀಜ್ ,ಇಬ್ರಾಹೀಂ ಯಾದ್ ಗಾರ್, ಎಸ್.ಎಸ್,ಅಸ್ಲಂ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ

