
ಸಕಲೇಶಪುರ : ತಾಲ್ಲೂಕಿನ ಸತ್ತಿಗಾಲ್ ಗ್ರಾಮ ವಿದ್ಯಾರ್ಥಿನಿ ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ಸ್ನೇಹಳ ಮನೆಗೆ ಕ್ರೈಸ್ತ ಸಮುದಾಯ ಭಕ್ತಾದಿಗಳಿಂದ ಸಂಗ್ರಹಿಸಲಾದ ಹಣವನ್ನು ನಿಡಲಾಯಿತು
ಸ್ನೇಹಳ ಮನೆಗೆ ಭೇಟಿ ಮಾಡಿ ಕ್ರೈಸ್ತ ಸಮಾಜ ನೀಡಿದಂತಹ ಉದಾರವಾದ ಧನಸಹಾಯ ರೂ.53,200=00 (ಐವತ್ತಮೂರು ಸಾವಿರದ ಎರಡುನೂರು ರೂಪಾಯಿಗಳು) ನಮ್ಮ ಧರ್ಮ ಕೇಂದ್ರದ ಗುರುಗಳು ಹಾಗು ಕನ್ಯಾಸ್ತೀಯವರೊಂದಿಗೆ ಮತ್ತು ದಯಾಳು ಮಾತೆಯ ಕುಟುಂಬದ ಸದಸ್ಯರೊಂದಿಗೆ ಆ ಮೊತ್ತವನ್ನು ಪೋಷಕರಿಗೆ ತಲುಪಿಸಲಾಯಿತು.
ಈ ಒಂದು ಕಾರ್ಯಕ್ಕೆ ಸಹಕರಿಸಿದ ತಮಗೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳನ್ನ ಸಮರ್ಪಿಸಿದ ಆನಂದ್ ಲಿಯೋ ವಾಸ್.




