
ಸಕಲೇಶಪುರ : ಶ್ರೀ ಗಣಪತಿ ಸೇವಾ ಸಮಿತಿ ,ಹಾಡ್ಯ ಸುಬ್ಬೇಗೌಡ ಪುರಭವನ 63 ನೇ ವರ್ಷದ ಗಣಪತಿ ಪ್ರತಿಷ್ಠಾನ ಕಾರ್ಯಕ್ರಮವು ಬೆಳಗ್ಗೆ 10-40 ಕ್ಕೆ ಗಣಪತಿ ಹೋಮ ನಂತರ 12-20 ಕ್ಕೆ ಗಣಪತಿ ಪ್ರತಿಷ್ಟಾಪನೆ ಕಾರ್ಯ ನಂತರ ಮಹಾ ಮಂಗಳಾರತಿ ನಡೆಯಿತು
ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಬ್ಯಾಕರವಳ್ಳಿ ಜಯಣ್ಣ ಅವರು ಗಣಪತಿಗೆ ಹಾಕಲಾಗಿದ್ದ ಪರೆದೆಯನ್ನು ಎಳೆಯುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಯಿತು
ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಅದ್ಯಕ್ಷ ರವಿ ಕುಮಾರ್, ಮಾಜಿ ಅದ್ಯಕ್ಷರಾದ ನಂದಿಕೃಪ ದೇವರಾಜು, ಚನ್ನವೇಣಿ ಎಂ ಶೆಟ್ಟಿ, ಯುವ ಮುಖಂಡ ಸಮಾಜ ಸೇವಕ ಪುನೀತ್ ಬನ್ನಹಳ್ಳಿ, ಮಹೇಶ್, ಉಮೇಶ್ ಸುರೇಶ್ ಗುರುರಾಜು ಇತರರು ಇದ್ದರು.
