ಆಲೂರು : ತಾಲೂಕಿನ ಬಾಳ್ಳುಪೇಟೆ- ಕೊಡ್ಲಿಪೇಟೆ ಮುಖ್ಯರಸ್ತೆಯಲ್ಲಿರವ ಆದರವಳ್ಳಿ ,ಹೈದೂರು, ಹೊಂಕರವಳ್ಳಿ, ಗಡಿ ಭಾಗದಲ್ಲಿ ಇರುವ ಮಾರಮ್ಮನ ಗುಡಿ ಸಮಿತಿಯ ವತಿಯಿಂದ ವಿಶೇಷ ಪೂಜೆ, ಅಭಿಷೇಕ, ಅರ್ಚನೆ, ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು.
ಪ್ರತಿನಿತ್ಯ ನೂರಾರು ಜನ ಭಕ್ತಾದಿಗಳು ಬಂದು ಹೋಗುತ್ತಾರೆ ಅಲ್ಲದೆ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರು ನಿಂತು ಕೈ ಮುಗಿದು ಹೋಗುವುದಲ್ಲದೆ, ಲಾರಿ ,ಕಾರು, ಬೈಕು, ಸವಾರರು ಸಹ ನಿಲ್ಲಿಸಿ ಕೈ ಮುಗಿದು ಕಾಣಿಕೆ ಹಾಕಿ ಕುಂಕುಮ ತೆಗೆದುಕೊಂಡು ಹೋಗುತ್ತಾರೆ,ಇಲ್ಲಿ ಕೈ ಮುಗಿದು ಹೋದರೆ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತವೆ, ಮಕ್ಕಳಿಗೆ ದೊಡ್ಡವರಿಗೆ ದಡಾರ, ಅಮ್ಮ, ಕಜ್ಜಿ ಇತ್ಯಾದಿ ಕಾಯಿಲೆಗಳು, ಇಲ್ಲಿ ಪ್ರಾರ್ಥನೆ ಮಾಡಿ ಹೋದರೆ ಎಲ್ಲವೂ ಫಲಕಾರಿಯಾಗಿ ಈಡೇರುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಅಪಾರ ಪ್ರಮಾಣದ ಭಕ್ತಾದಿಗಳು ಉಪಸ್ಥಿತರಿದ್ದರು.