
ಬೆಂಗಳೂರು : ವಿಧಾನಸೌಧದಲ್ಲಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಹಿಂದೂ ಮುಖಂಡರು ಹಾಗೂ ಮುಸ್ಲಿಮರ ಅಹವಾಲು ಸ್ವೀಕಾರ ಮಾಡಿದ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾದ ಜಿ.ಪರಮೇಶ್ವರ್, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ ಜಾರ್ಜ್ ವಸತಿ ಸಚಿವ ಜಮೀರ್ ಅಹಮದ್, ಕಂದಾಯ ಇಲಾಖೆ ಕಾರ್ಯದರ್ಶಿ, ಇತರೆ ಅಧಿಕಾರಿಗಳು ಅಹವಾಲು ಸ್ವೀಕಾರ ಮಾಡಿದರು.
ದತ್ತಪೀಠದ ಗುಹೆ ಒಳಗೆ ಹೋಗುವ ಮುಂಭಾಗ ಇರುವ ಕಲ್ಲಿನ ಕಂಬದಲ್ಲಿ ಹಿಂದೂ ಕುರುವುಹುಗಳಿದ್ದು ಇದರ ಮಾಹಿತಿಯನ್ನು ಮಾನ್ಯ ಗೃಹ ಸಚಿವರಿಗೆ ಮಾಹಿತಿ ಪತ್ರದ ಮೂಲಕ ನೀಡಿದ ಹಿಂದೂ ಮುಖಂಡ ರಘು ಸಕಲೇಶಪುರ ಹಾಗೂ ಇತರರಿದ್ದರು.
