
ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆಯ ಉದ್ದೇಶವೇ ಸಮಾಜ ಸೇವೆ ಮಾಡುವುದಾಗಿದ್ದು ಆರೋಗ್ಯ, ಪರಿಸರ, ಸ್ವಚ್ಚತೆ, ರಸ್ತೆ ಸುರಕ್ಷತೆ, ರಕ್ತದಾನ ಶಿಬಿರ,ವಿಕಲಚೇತನರಿಗೆ ಕೃತಕ ಕಾಲು ಜೋಡಣೆ,ಇನ್ನೂ ಹಲವು ಸೇವಾ ಚಟುವಟಿಕೆಗಳನ್ನು ಲಯನ್ಸ್ ಸೇವಾ ಸಂಸ್ಥೆಯು ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಎಲ್ಲರೂ ಲಯನ್ಸ್ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕಾಗಿ ಮನವಿ ಮಾಡಿದರು,
ಈ ಸಂದರ್ಭದಲ್ಲಿ ಫಾಸ್ಟ್ ಗವರ್ನರ್ ಸಂಜೀತ್ ಶೆಟ್ಟಿ, ಲಯನ್ಸ್ ಸಂಸ್ಥೆಯ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅದ್ಯಕ್ಷ ರಾಬಿ ಸೋಮಯ್ಯ, ಪ್ರಾಂತೀಯ ರಾಯಬಾರಿ ಎನ್.ಎಸ್ ವಿಠಲ್,ವಲಯ ಅದ್ಯಕ್ಷ ರಘು ಪಾಳ್ಯ, ಲಯನ್ಸ್ ಅದ್ಯಕ್ಷ ಕೃಷ್ಣಪ್ಪ ಪೂಜಾರಿ,ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಪ್ರೇಮನಾಥ್,ಲಿಯೋ ಅದ್ಯಕ್ಷೆ ಆಶ್ರಿತಾ ಪೂಜಾರಿ, ಕಾರ್ಯದರ್ಶಿ ಅಯಿಷಾ ಖಾದರ್ ಇದ್ದರು.ಲಯನ್ಸ್ ಸಂಸ್ಥೆಗೆ ನೂತನವಾಗಿ ಎಂ.ಆರ್.ಎಫ್ ಲೋಹಿತ್, ಯೂಸೂಫ್, ತೇಜಸ್ವಿ ಬಾಗರಹಳ್ಳಿ ಸದಸ್ಯತ್ವ ಪಡೆದರು. ಕಾರ್ಯಕ್ರಮದಲ್ಲಿ ಜೆಎಸ್ಎಸ್ ಬಾಗೆ ಶಾಲೆಯ ಚಿತ್ರಕಲಾ ಶಿಕ್ಷಕ ಶ್ರೀಧರ,ಸ್ಥಳೀಯ ಪ್ರತಿಭೆ ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು ಸಾಗರ್,ಸಾವಯವ ಕೃಷಿಕ ಶಿವಪ್ಪ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.