
ಆಲೂರು : ಪ್ರಕ್ಕೃತಿ ಸಣ್ಣ ಕಾಫಿ ಬೆಳೆಗಾರರ ಸಂಘದ ನೂತನ ಕಟ್ಟಡವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟನೆ ಮಾಡಿದರು
ಇಂದು ಆಲೂರು ತಾಲ್ಲೂಕು ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಲಪುರ ಮಠ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತಾನಾಡಿದ ಅವರು ತಾಲ್ಲೂಕಿನ ಅರೆ ಮಲೆನಾಡು ಭಾಗದ ರೈತರು ಕೂಡ ಕಾಫಿ ಬೆಳೆದು ವಿಶಿಷ್ಟ ರೀತಿಯಲ್ಲಿ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿರುವುದು ಸಂತಸದ ವಿಚಾರ ಸಂಘ ಸಂಘಟನೆಗಳು ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಹಾಗೂ ಕಾಫಿ ಬೆಳೆಯ ಸ್ಥಿತಿಗತಿಗಳ ಅರಿಯುವಲ್ಲಿ ಸಹಕಾರಿಯಾಗುತ್ತದೆ ಸಂಘಟನೆಗಳ ಹಲವಾರು ಹೋರಾಟಗಾರರಿಂದ ಸರ್ಕಾರದ ಗಮನ ಸೆಳೆಯುವಲ್ಲಿ ಹಾಗೂ ಸರ್ಕಾರಕ್ಕೆ ತಮ್ಮ ಕುಂದು ಕೊರತೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.



