
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ ಯವರು ರಾಜ್ಯಾದ್ಯಕ್ಷರಾದ ಡಾ॥ಸಾಗರ್ ಜಾನೇಕೆರೆ ಯವರ ಅನುಮತಿ ಮೇರೆಗೆ ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕು ಯುವ ಘಟಕದ ಅದ್ಯಕ್ಷರಾಗಿ ಮುಯಿನ್ ರವರನ್ನು ಆಯ್ಕೆ ಮಾಡಿ ಸಂಘಟನೆಯ ಶಾಲು ಹೊದಿಸಿ ಕನ್ನಡ ಭಾವುಟ ನೀಡುವುದರ ಮೂಲಕ ಜವಾಬ್ದಾರಿ ನೀಡಿರುತ್ತಾರೆ..
ಈ ಕಾರ್ಯಕ್ರಮ ದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ತೇಜು ಸುಳ್ಳಕ್ಕಿ,ಚಂದ್ರಶೇಖರ್,ನಾಗರಾಜು,ರುತೇಶ್ ಬಾಗೆ,ಭರತ್,ಶೇಖರ್,ಸುಮಂತ್, ಇಮ್ರಾನ್,ಕೋಮಲೇಶ್,ವಿಲ್ಸನ್ ಮುಂತಾದವರಿದ್ದರು.
