ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯಲ್ಲಿ ನಿಲ್ಲದ ಕಾಡಾನೆಗಳ ಉಪಟಳದಿಂದ ರೈತರು ತಮ್ಮ ಬೆಳೆಗಳ ಜೊತೆ ಪ್ರಾಣವನ್ನು ರಕ್ಷಿಸಿಕೊಳ್ಳಲು ಹರಸಹಸ ಪಡುವಂತಹ ಪರಿಸ್ಥಿತಿ ಎದುರಾಗಿದೆ.

ಪ್ರತಿನಿತ್ಯ ಸಂಜೆ ಆಗುತ್ತಿದ್ದಂತೆ ಕಾಡಾನೆಗಳು ನಾಡಿನತ್ತ ಲಗ್ಗೆ ಇಡುತ್ತಾ ರೈತರ ಕಾಫಿ ತೋಟ ಹಾಗೂ ಗದ್ದೆಗೆ ಬರುತ್ತಿವೆ. ಅಲ್ಲದೆ ಮನೆಗಳ ಹತ್ತಿರ ಬರುವ ಕಾಡಾನೆಗಳು ಈಗ ಜನರಲ್ಲಿ ಭಯ ಭೀತಿ ಉಂಟು ಮಾಡುತ್ತಿವೆ. ಮಂಗಳವಾರ ಬೆಳಗಿನ ಜಾವದಲ್ಲಿ ವಳಲಹಳ್ಳಿ ವಿ.ಎಂ ರಾಜೇಗೌಡರ ಮನೆ ಅಂಗಳಕ್ಕೆ ಬಂದ ಮೂರು ಕಾಡಾನೆಗಳು ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ಆಲ್ಟೊ ಕಾರಿನ ಗಾಜನ್ನು ಪುಡಿ ಮಾಡಿದೆ. ಅಲ್ಲದೆ ನೀರಿಗೆ ಅಳವಡಿಸಿದ್ದ ಮೋಟಾರ್ ಹಾಗೂ ಪೈಪುಗಳನ್ನು ಮುರಿದು ಹಾಕಿ ಹಾನಿಯನ್ನುಂಟು ಮಾಡಿದ್ದವು. ಇದರಿಂದ ಭಯಭೀತರಾದ ರಾಜೇಗೌಡರು ಹಾಗೂ ಮನೆಯವರು ಹೊರಗಡೆ ಬರಲು ಹೆದರುತ್ತ ಮನೆಯಲ್ಲೇ ಕೂರುವಂತಹ ಪರಿಸ್ಥಿತಿ ಎದುರಾಗಿತ್ತು. ವಿಷಯ ತಿಳಿದ ವಳಲಹಳ್ಳಿ ಬೆಳೆಗಾರರ ಸಂಘದವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಕಾಫಿ ಗಿಡ ಹಾಗೂ ನೀರಿನ ಮೋಟರ್,ಪೈಪುಗಳನ್ನು ಪರಿಶೀಲಿಸಿದರು.

ನಂತರ ಅರಣ್ಯ ಅಧಿಕಾರಿಗಳ (RFO ) ಜೊತೆ ಮಾತನಾಡಿದ ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್ ಮರ್ಜನಹಳ್ಳಿ ” ಹಾನಿ ಒಳಗಾದ ಕಾಫಿ ಗಿಡ, ನೀರಿನ ಮೋಟರ್ ಸೇರಿದಂತೆ ಪೈಪುಗಳಗೆ ಕೂಡಲೆ ಸೂಕ್ತ ಪರಿಹಾರ ಕೊಡುವುದರ ಜೊತೆಗೆ ಮುಂದೆ ಇತರದ ಅನಾಹುತ ಆಗದಂತೆ ಸಿಬ್ಬಂದಿ ವರ್ಗದವರ ಮೂಲಕ ಸೂಕ್ತ ಕ್ರಮ ಕೈಗೊಳ್ಳಿ ಹಾಗೂಈ ಭಾಗದಲ್ಲಿ ಈಗಾಗಲೇ ನಾಲ್ಕರಿಂದ ಐದು ಕಾಡಾನೆಗಳು ಬೀಳು ಬಿಟ್ಟಿದ್ದು, ಅದರಲ್ಲೂ ಎರಡು ದೊಡ್ಡ ಆನೆ ಹಾಗು ಒಂದು ಮರಿ ಆನೆ ಪ್ರತಿನಿತ್ಯ ವಳಲಹಳ್ಳಿ,ಜಾತಹಳ್ಳಿ,ಬೊಮ್ಮನಹಳ್ಳಿ, ಕರಡಿಗಾಲ ಸೇರಿದಂತೆ ಚಿನ್ನಳ್ಳಿಯ ಜನರಲ್ಲಿ ಭಯಭೀತರಾಗಿ ಇರುವಂತೆ ಮಾಡಿವೆ.ಈ ಪುಂಡಾಟ ಮೆರೆಯುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ಬಾಲು ಚಿನ್ನಹಳ್ಳಿ,ಕಾರ್ಯದರ್ಶಿ ಅರುಣ್ ಗೌಡ, ಖಜಾಂಚಿ ಹೂವಣ್ಣ ಗೌಡ ಹಿರಿದನಹಳ್ಳಿ , ಜಂಟಿ ಕಾರ್ಯದರ್ಶಿಗಳಾದ ಅನಿಲ್ ಜಾತಹಳ್ಳಿ, ವಿಜಯಕುಮಾರ್, ಸಹ ಕಾರ್ಯದರ್ಶಿ ಪುನೀತ್ ಜಾತಹಳ್ಳಿ, ನಿರ್ದೇಶಕರಾದ ಚಿನ್ನಹಳ್ಳಿ ಗಿರೀಶ್,ವಸಂತ್ ಬೊಮ್ಮನಕೆರೆ ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *