
ಸಕಲೇಶಪುರ : ಶುಕ್ರವಾರ ಸುಭಾಷ್ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದ ಸಂಯೋಜಕದೊಂದಿಗೆ ಮಾತನಾಡಿದ ಅವರು ಅವ್ಯವಸ್ಥೆಯ ತಾಣವಾಗಿರುವ ಹಾಗೂ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯೇ ಸರಿ ಇಲ್ಲದಿದ್ದರೂ ಮಕ್ಕಳು ಯಾವ ರೀತಿ ಶೌಚಾಲಯಕ್ಕೆ ಹೋಗಬೇಕು ಅವ್ಯವಸ್ಥೆಯ ಆಗರವಾಗಿರುವ ಈ ಸುಭಾಷ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಏಕೆ ಆಯೋಜನೆ ಮಾಡಿದಿರಿ ಎಂದು ತರಾಟೆಗೆ ತೆಗೆದುಕೊಂಡರು
ನಂತರ ಅವರನ್ನು ಶೌಚಾಲಯ ದತ್ತ ಕರೆದೊಯ್ದು ಶೌಚಾಲಯದ ದುಸ್ಥಿತಿಯ ನರಕ ದರ್ಶನ ಮಾಡಿಸಿದರು.
ಈ ಸಂಧರ್ಭದಲ್ಲಿ ಹೆತ್ತೂರು ಹೋಬಳಿ ಅದ್ಯಕ್ಷರಾದ ದಿಂಡಿಮ,ಅಗ್ರಹಾರ ಘಟಕದ ಅದ್ಯಕ್ಷ ಸುದಿ, ಉಪಾದ್ಯಕ್ಷರಾದ ಭರತ್,ಸಾಗರ್, ಕುಮಾರ್, ತಾಲೂಕು ಸಂಚಾಲಕರಾದ ಎ. ಸಿ. ಪ್ರಸಾದ್, ಪುರುಷೋತ್ತಮ್, ಇನ್ನೂ ಮುಂತಾದ ಕಾರ್ಯಕರ್ತರಿದ್ದರು.
