
ಹಾಸನ : ದಿನಾಂಕ 18-9-2025 ರಂದು ಹಾಸನ ವೀರಶೈವ ಲಿಂಗಾಯತ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪೂಜೆ ನೇರವೇರಿಸಿ ವೀರಶೈವ ರುದ್ರಭೂಮಿ ಅಭಿವೃದ್ಧಿಗೆ ಐವತ್ತು ಲಕ್ಷ ರೂಗಳನ್ನು ಹಾಸನ ಮಹಾನಗರ ಪಾಲಿಕೆಯಿಂದ ಕೆಲಸ ಮಾಡುವ ಕಾರ್ಯ ಕೈಗೊಂಡಿದೆ ಎಂದು ಹಾಸನ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ತಿಳಿಸಿದರು.
ಈ ಸಂಧರ್ಭದಲ್ಲಿ ಹಾಸನ ಮಹಾನಗರ ಪಾಲಿಕೆ ಮಹಾಪೌರರಾದ ಗಿರೀಶ್ ಚನ್ನವೀರಪ್ಪ , ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರಾದ ಬಿ ಪಿ ಐಸಾಮಿಗೌಡರು. ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಬಿ ಎಂ ಭೂವನಾಕ್ಷ, ಕೀರಣ ಕುಮಾರ್ ಹೊಸಮನಿ, ಕಟ್ಟಾಯ ಶಿವಕುಮಾರ್, ಈ. ಎಂ.ರುದ್ರ ಕುಮಾರ್, ಹೆಚ್ ಮಲ್ಲಿಕಾರ್ಜುನ, ಶೋಭನ್ ಬಾಬು, ನಾಗೇಶ್ , ಲತೇಶ್ ಹೇಮಂತ್ ಕುಮಾರ್, ಹೆಚ್ ಕೆ ಮಿಥುನ್, ವಿಶಾಲ್. ಸಂಗಂ,ಪುನಿತ್ ಪಟೇಲ್,ಮಧು. ಅವಿನಾಶ್. ಮತ್ತೀತರರು ಇದ್ದರು.
