
ಸಕಲೇಶಪುರ : ತಾಲೂಕು ಘಟಕದ ಅಧ್ಯಕ್ಷರಾದ ಗಗನ್ ಗೌಡ ಅವರ ನೇತೃತ್ವದಲ್ಲಿ ವೇದಿಕೆಯ ಸದಸ್ಯರು ಸ್ಥಳಕ್ಕೆ ತೆರಳಿ, ಸಂಸ್ಥೆಯ ನಿರ್ವಾಹಕರಿಗೆ ನಾಮಫಲಕ, ಬೋರ್ಡ್ ಹಾಗೂ ಜಾಹೀರಾತು ಫಲಕಗಳಲ್ಲಿ ಕನಿಷ್ಠ 60% ಕನ್ನಡ ಬಳಕೆಯು ಕಡ್ಡಾಯ ಎಂಬ ನಿಯಮವನ್ನು ಪಾಲಿಸಲು ಸೂಚನೆ ನೀಡಿದ್ದಾರೆ.
ಇದು ಕೇವಲ ಒಂದು ಭಾಷೆಯ ವಿಷಯವಲ್ಲ — ಇದು ನಮ್ಮ ಅಸ್ತಿತ್ವದ, ಗೌರವದ, ಮತ್ತು ಸಂವಿಧಾನಿಕ ಹಕ್ಕಿನ ಹೋರಾಟ.ಕನ್ನಡವನ್ನು ಕಡೆಗಣಿಸುವ ಯಾವುದೇ ಕಂಪನಿ, ಎಷ್ಟು ದೊಡ್ಡದಾದರೂ ಕೂಡ, ಕರ್ನಾಟಕದ ಮಣ್ಣಿನಲ್ಲಿ ಕನ್ನಡವಿಲ್ಲದೆ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಗಗನ್ ಗೌಡ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಅಧ್ಯಕ್ಷ ವಸಂತ ಬೊಮ್ಮನಕೆರೆ.ನಗರ ಘಟಕ ಅಧ್ಯಕ್ಷ ಪ್ರಜ್ವಲ್ ಮತ್ತು ಕರವೇ ಕುಟುಂಬದ ಸದಸ್ಯರು ಹಾಜರಿದ್ದರು.
