
ಸಕಲೇಶಪುರ : ನವಮಿ ಎಸ್. ಎಸ್. ಅವರು ಪತ್ರಕರ್ತ ಸುಧೀರ್ ಎಸ್. ಎಲ್ ಹಾಗೂ ಶಿಕ್ಷಕಿ ಮೇಘ ಜಿ. ಎನ್ ದಂಪತಿಗಳ ಪುತ್ರಿ ನವಮಿ ಎಸ್. ಎಸ್. ರವರು 625 ಅಂಕಗಳಿಗೆ 622 ಅಂಕಗಳನ್ನು ಪಡೆಯುವ ಮೂಲಕತಾಲೂಕಿಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಬೇಟಿ ನೀಡಿ ನವಮಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಪರಮೆಶ್, ಮಲ್ನಾಡ್ ಮೆಹಬೂಬ್, ಪ್ರಸನ್ನ ಕುಮಾರ್, ರವಿಕುಮಾರ್, ಜೈ ಭೀಮ್ ಮಂಜು, ಜಮೀಲ್ ಅಹಮದ್, ಯೋಗೀಶ್ , ಅಕ್ಬರ್ ಜುನೈದ್, ಎಂ.ಬಿ. ಉಮೇಶ್, ಸಮಾಜದ ಮುಖಂಡರಾದ ಬ್ಯಾಕರವಳ್ಳಿ ಜಯಣ್ಣ, ನಾರಾಯಣ ಆಳ್ವ ಶಾಹೀನ್ ಸುಹಾನ್ ,ರಾಣಿ ಮಲ್ನಾಡ್,ಸುಹಾರ, ಹಾಗೂ ಇತರರು ಉಪಸ್ಥಿತರಿದ್ದರು.
