
ಸಕಲೇಶಪುರ : ಕಳೆದ ಎರಡು ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಕೊಲ್ಲಹಳ್ಳಿ ಹಾಗೂ ಹೊಸೂರು ಸಮೀಪ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೆದ್ದಾರಿ ಪಕ್ಕದಲ್ಲಿ ಸುರಿದಿರುವ ಮಣ್ಣು ಮಳೆಯಿಂದ ಕೊಚ್ಚಿಹೋಗಿದ್ದು ಭೂ ಕುಸಿತ ಉಂಟಾಗುತ್ತಿದ್ದು ಈ ವರದಿ ಮಾಡಲು ತೆರಳಿದ ಪತ್ರಕರ್ತ ಪ್ರದೀಪ್ ಅವರು ವೀಡಿಯೋ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಜಾರಿ ಬಿದ್ದಾಗ ಒರಿಸ್ಸಾ ಮೂಲದ ಕಾಫಿ ತೋಟದ ಕೂಲಿ ಕಾರ್ಮಿಕರೊಬ್ಬರು ರಕ್ಷಣೆಗೆ ದಾವಿಸಿ ಮೇಲೆತ್ತಿ ಅವರನ್ನು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಅವರ ಕಾರಿನ ಬಳಿ ಬಿಟ್ಟು ಮಾನವೀಯತೆ ಮೆರೆದ ದೃಶ್ಯ ಕಂಡುಬಂದಿದ್ದು ಸಹಾಯ ಮಾಡಲು ಯಾವುದೇ ಭಾಷೆ ,ಧರ್ಮ ,ಜಾತಿ, ಹೊರತಲ್ಲ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.
