
ಸಕಲೇಶಪುರ :- ಮೊದಲೇ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಂದ foriegn exchange ಮೂಲಕ ಕೋಟಿಗಟ್ಟಲೆ ಸಂಪಾದನೆ ಮಾಡಿದರು ಕಾಫಿ ಬೋರ್ಡ್ ಮೂಲಕ ನೀಡುತಿದ್ದ ಸಬ್ಸಿಡಿಗಳು ಸರಿಯಾಗಿ ನೀಡುತಿಲ್ಲ ಇನ್ನು ರಾಜ್ಯ ಸರ್ಕಾರ ಬೆಳೆಗಾರರ ನೆರವಿಗೆ ಬರುತ್ತೆ ಅಂತ ಭಾವಿಸಿದ್ದರೆ ಈ ಸಾಲಿನ ಬಜೆಟ್ ನಲ್ಲಿ ತೋಟಗಾರಿಕೆ ಇಲಾಖೆಗೆ ಮೀಸಲಿದ್ದ ಹಣ ಕಡಿತ ಮಾಡಿದೆ , ಆನೆ ಸಮಸ್ಯೆ ನಿರ್ವಹಣೆಗೆ ಎಲಿಫೆಂಟ್ ಟಾಸ್ಕ್ ಫೋರ್ಸ್ನಗೆ ಅಥವಾ ಎಲಿಫೆಂಟ್ ಕಾರಿಡಾರ್ ಗೆ ಯಾವುದೇ ರೀತಿಯ ಹಣ ಮೀಸಲು ಇಡದೆ ಮಲೆನಾಡಿನ ಕಾಫಿ, ಅಡಿಕೆ ಬೆಳೆಗಾರರ ನೆರಿವಿಗೆ ಬಾರದೆ ಸಂಪೂರ್ಣ ನಿರ್ಲಕ್ಷ ಮಾಡಿದೆ.
ಇನ್ನು ರೈತರಿಗೆ ಮಧ್ಯಂತರ ಹಾಗು ದೀರ್ಘವಾದಿ ಸಾಲ ಹೆಚ್ಚಳ ಮಾಡಿದೆ ಇದರಿಂದ ಏನು ಉಪಯೋಗವಿಲ್ಲ ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲದ ಬಡ್ದಿ ಮನ್ನಾ ಮಾಡಬೇಕಿತ್ತು . ಒಟ್ಟಾರೆಯಾಗಿ ಹೇಳುವುದಾದರೆ ಇದ್ದೊಂದು ರೈತ ವಿರೋಧಿ ಬಜೆಟ್ ಎಂದು ಮಾಧ್ಯಮ ಗಳಿಗೆ ಹೇಳಿದರು.
