ಶ್ರೀ ಕೆಂಚಾಂಬ ದೇವಸ್ಥಾನ ಹರಿಹಳ್ಳಿ, ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು. ಸ್ವಸ್ತಿಶ್ರೀ ಶುಭಕೃತ್ ನಾಮ ಸಂವತ್ಸರದ ವೈಶಾಖ ಶುದ್ಧ 3 ಭಾನುವಾರ ದಿನಾಂಕ 23.04.2023 ರಿಂದ ವೈಶಾಖ ಶುದ್ಧ 10 ಭಾನುವಾರ ದಿನಾಂಕ 30.04.2023ರವರೆಗೆ ನಡೆಯಲಿರುವ ಶ್ರೀ ಕೆಂಚಾಂಬಿಕೆಯ ದೊಡ್ಡಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು: ದಿನಾಂಕ : 23.04.2023ನೇ ಭಾನುವಾರ ಜಾತ್ರಾಸಾರು, ಪಾದಪೂಜೆ, ವಸಂತಸೇವೆ ದಿನಾಂಕ : 26.04.2023ನೇ ಬುಧವಾರ ಉಯ್ಯಾಲೆ ಜಾತ್ರೆ (ಪಾದ ತೂಗುವ ಜಾತ್ರೆ) ಉತ್ಸವಾದಿಗಳು ದಿನಾಂಕ : 28.04.2023ನೇ ಶುಕ್ರವಾರ ಉಕ್ಕಂದ, ಪೂಜೆದಿನಾಂಕ : 29.04.2023ನೇ ಶನಿವಾರ ಉದ್ಘಾರ್ಚನೆ, ಸಪ್ತಮಾತೃಕಾಲಂಕಾರ ಜಾತ್ರಾ ಸುಗ್ಗಿದಿನಾಂಕ : 30.04.2023ನೇ ಭಾನುವಾರ ದೊಡ್ಡಜಾತ್ರೆ, ಉತ್ಸವಾದಿಗಳು ಮೇಲ್ಕಂಡ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹಾಗೂ ಕೆಂಚಾಂಬ ದೇವಾಲಯದ ಪ್ರಾಕಾರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತನು-ಮನ ಧನ ಸಹಾಯದೊಂದಿಗೆ ಸಹಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳು, ಆಲೂರು,ವ್ಯವಸ್ಥಾಪನಾ ಸಮಿತಿ ಶ್ರೀ ಕೆಂಚಾಂಬ ದೇವಸ್ಥಾನ, ಹರಿಹಳ್ಳಿ ಸುತ್ತಮುತ್ತಲಿನ 48 ಗ್ರಾಮಗಳ ಗ್ರಾಮಸ್ಥರುಗಳು ಹಾಗೂ ಭಕ್ತಾದಿಗಳು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *