
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಬೆಳೆಗಾರರ ಹಾಗೂ ಹೆತ್ತೂರು ಒಕ್ಕಲಿಗರ ಸಂಘದ ವತಯಿಂದ ನೂತನ ಶಾಸಕರಾದ ಸಿಮೆಂಟ್ ಮಂಜುರವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹೆತ್ತೂರು ನಾಗರಾಜ್ ಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನೂತನ ಶಾಸಕರು ಕಾರ್ಯಕ್ರಮದಲ್ಲಿ ಹೋಬಳಿಯ ಬೆಳೆಗಾರರ ಸಮಸ್ಯೆ ಆಲಿಸಿದರು.ಕಾರ್ಯ್ರಮದಲ್ಲಿ ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದೇವರಾಜ್ ಗೌಡ,ಭೀಮಾ ವಿಜಯ್ ಸಂಪಾದಕರಾದ ಹೆತ್ತೂರು ನಾಗರಾಜ್ ,ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ, ಸೇರಿದಂತೆ ಹೋಬಳಿ ಯ ಎಲ್ಲಾ ಗ್ರಾಮ ಪಂಚಾಯಿತಿಯ ಬೆಳೆಗಾರರ ಸಂಘದ ನಿರ್ದೇಶಕರು ಹಾಗೂ ಹೋಬಳಿ ವ್ಯತಿಯ ರೈತರು ಭಾಗವಹಿಸಿದರು.


