
ಸಕಲೇಶಪುರ : ಪಟ್ಟಣದ ಹೇಮಾವತಿ ಸೇತುವೆ ಸಮೀಪ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದ ಮೇಲ್ಬಾಗದ ಪಾದಚಾರಿ ರಸ್ತೆಯಲ್ಲಿ ಕಲ್ಲಿನ ಕಂಬ ಹಾಕಿ ತಂತಿ ಬೇಲಿಯನ್ನು ಅಳವಡಿಸಿದ್ದರಿಂದ ಪ್ರತಿನಿತ್ಯ ತಿರುಗಾಡುವ ಪಾದಚಾರಿಗಳಿಗೆ ಅನಾನುಕೂಲವಾಗುವ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು ಇದನ್ನು ಗಮನಿಸಿ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಇಂದು ತಂತಿ ಬೇಲಿಯನ್ನು ತೆರವು ಮಾಡಿಸಿದರು.





