
ಸಕಲೇಶಪುರ. ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯಲ್ಲಿ ನಾಗೇಶ್ ಕೆರೆಮನೆ ಅವರ ಶ್ರೀ ಮಂಜುನಾಥಸ್ವಾಮಿ ಕಾಂಪ್ಲೆಕ್ಸ್(ಹಳೆಯ ಕ್ಲಬ್ ಬಿಲ್ಡಿಂಗ್ )ನ ಕಟ್ಟಡಡಲ್ಲಿ ನೂತನ ತೇಜು ಕ್ಲಾತ್ ಸೆಂಟರ್ ಹೆಸರಿನ ಬಟ್ಟೆ ಅಂಗಡಿಯನ್ನು ಇಂದು ಬೆಳಗ್ಗೆ 9.30ಗಂಟೆಗೆ ಶಾಸಕರಾದ ಸಿಮೆಂಟ್ ಮಂಜು ಉದ್ಘಾಟನೆ ಮಾಡುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ಮುಖಂಡರಾದ ವಳಲಹಳ್ಳಿ ಅಶ್ವಥ್, ಜೆಡಿಎಸ್ ಮುಖಂಡರಾದ ರಾಜೇಗೌಡ , ಕಾಂಗ್ರೆಸ್ ಮುಖಂಡರಾದ ಕೆ.ಪಿ ಕೃಷ್ಣೇಗೌಡ , ಬಿಜೆಪಿ ಮುಖಂಡರಾದ ಕಾಮನಹಳ್ಳಿ ತೀರ್ಥಾನಂದ( ಕೀರ್ತಿ ), ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುದರ್ಶನ್, ಆನಂದ್, ರೇಣು ಕುಮಾರ್, ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ,ಮಹೇಶ್, ಧರ್ಮ,ಕೌಶಿಕ್ ಗೌಡ, ಕೆ ಬಿ ಕಿರಣ್ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕುಟುಂಬ ವರ್ಗದವನು ಹಾಗೂ ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು.




