
ಸಕಲೇಶಪುರ : ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮಪಂಚಾಯಿತಿಯ ನೂತನ ಬೆಳೆಗಾರರ ಸಂಘವನ್ನು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರದ ಕೆ.ಏನ್ ಕ್ಯಾನಹಳ್ಳಿ ಸುಬ್ರಮಣ್ಯ ಉದ್ಘಾಟನೆ ಮಾಡಿದರು.
ಚಂಗಡಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಎಮ್. ಡಿ ಕೋಮರಿ ಗೌಡ, ಉಪಧ್ಯಕ್ಷರಾಗಿ ಬಿ. ಪಿ ಪ್ರಕಾಶ್ ಬಸುಗುಳ್ಳ,ಕಾರ್ಯದರ್ಶಿ ಪುನೀತ್ ಬೆಕ್ಕನಹಳ್ಳಿ, ಖಜಾಂಚಿ ಎಸ್. ಎಂ. ಗುರುಮೂರ್ತಿ,ಗೌರವ ಕಾರ್ಯದರ್ಶಿ ಏನ್. ಏನ್. ಮಹೇಂದ್ರ ಹಾಗೂ 5ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಬಿಜೆಪಿ ಮುಖಂಡರಾದ ಕಾಮನಹಳ್ಳಿ ತೀರ್ಥನಂದ (ಕೀರ್ತಿ ) ಅಭಿನಂದನೆ ಸಲ್ಲಿಸಿದರು.



