ನಾಳೆ ಸಂಜೆ 5 ಕ್ಕೆ…..ಸಮಿತಿ ಸಂಚಾಲಕರು ಪ್ರದೀಪ್ ಪೂಜಾರಿ.

ಸಕಲೇಶಪುರ.ತಾಲೂಕಿನಲ್ಲಿ 7’ನೇ ವರ್ಷದ ಶ್ರೀ ರಾಮಧೂತ ಹಿಂದೂ ಮಹಾಗಣಪತಿಯನ್ನು ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲು ನಿಶ್ಚಯಿಸಲಾಗಿದೆ.
ಇದರ ಮೊದಲ ಹಂತವಾಗಿ ಪ್ರತಿಷ್ಠಾಪನಾ ಮಂಟಪದ ಭೂಮಿಪೂಜೆ ಗೋವು ಪೂಜೆ ಹಾಗೂ ಧ್ವಜಾರೋಹಣವನ್ನು ಮಂಗಳವಾರ ಸೆಪ್ಟೆಂಬರ್ 5 ರಂದು ಸಂಜೆ 5.30 ಕ್ಕೆ ಶ್ರೀ ಗುರುವೇಗೌಡ ಕಲ್ಯಾಣ ಮಂಟಪಪದ ಆವರಣ ಕಮಲ್ ದೇವ್ ನರ್ಸಿಂಗ್ ಹೋಮ್ ಮುಂಭಾಗ, ಎಸ್.ಪಿ ರಸ್ತೆ ಸಕಲೇಶಪುರ, ಇಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಶ್ರೀ ರಾಮಧೂತ ಹಿಂದೂ ಮಹಾಗಣಪತಿ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಪ್ರದೀಪ್ ಪೂಜಾರಿ ತಿಳಿಸಿದ್ದಾರೆ.

