
ಸಕಲೇಶಪುರ : ತಾಲ್ಲೂಕಿನ ಹಾನಬಾಳು ಹೋಬಳಿ ಕ್ಯಾಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಮನಹಳ್ಳಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ. ಭವ್ಯ ಸುರೇಂದ್ರ ರವರ ಮನೆ ಮುಂದೆ ಇದ್ದಂತ ದೊಡ್ಡ ಗಾತ್ರದ ಶ್ರೀಗಂಧದ ಮರವನ್ನ ರಾತ್ರಿ ಸಂದರ್ಭದಲ್ಲಿ ಮರಗಳ್ಳರು ಕಡಿದು ಕದ್ದೋಯ್ದಿದಿದ್ದು ಮರಗಳ್ಳರನ್ನು ಅರಣ್ಯ ಇಲಾಖೆಯವರು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಭವ್ಯ ಸುರೇಂದ್ರ ಅವರು ಮನವಿ ಮಾಡಿದ್ದಾರೆ.


