
ಸಕಲೇಶಪುರ :-ಪಟ್ಟಣದ ಹಳೆಬಸ್ ನಿಲ್ದಾಣದ ಶೌಚಾಗುಂಡಿ ತುಂಬಿ ಪಕ್ಕದ ವಾಹನ ನಿಲುಗಡೆಯ ಪಾರ್ಕಿಂಗ್ ಜಾಗದಲ್ಲಿ ಹರಿಯುತ್ತಿರುವ ಸುದ್ದಿಯನ್ನು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಹೇಳಿಕೆಯನ್ನು ಆದರಿಸಿ ಸುದ್ದಿಯನ್ನು ಪ್ರಕಟಿಸಲಾಗಿತ್ತು
ಇದರಿಂದ ಎಚ್ಚೆತ್ತ ಪುರಸಭೆಯ ಅಧಿಕಾರಿಗಳು ಪುರಸಭೆಯ ಸಕ್ಕಿಂಗ್ ಮೆಷಿನ್ ಕೆಟ್ಟು ನಿಂತ ಕಾರಣ ಅರಕಲಗೂಡಿನಿಂದ ಸಕ್ಕಿಂಗ್ ಮೆಷಿನ್ ವಾಹನ ತರಿಸಿ ಕೊನೆಗೂ ಹಳೆ ಬಸ್ಟಾಂಡ್ ಹಿಂಭಾಗದ ಸಾರ್ವಜನಿಕ ಶೌಚಾದ ಗುಂಡಿಯನ್ನು ಸ್ವಚ್ಛಗೊಳಿಸಿ ಡಿಡಿಟಿ ಪೌಡರ್ ಹಾಕುವ ಮೂಲಕ ವಾಸನೆಮುಕ್ತಗೊಳಿಸುವ ಮೂಲಕ ಮುಂದೆ ಪಟ್ಟಣದ ಸಕಲೇಶಪುರ ಮಹಾಜನತೆಗೆ ಬರುವಂತಹ ಸಾಂಕ್ರಾಮಿಕ ರೋಗವನ್ನು ತಡೆಗಟಲು ಸಹಕರಿಸಿದ ಪುರಸಭಾ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಮಾನವ ಹಕ್ಕುಗಳ ಜಿಲ್ಲಾದ್ಯಕ್ಷ . ಜೀವನ್ ಗೌಡ ಹಾಗೂ ತಾಲ್ಲೂಕು ಅದ್ಯಕ್ಷ ವಿಜಯ್ ಕುಮಾರ್ ಸಲ್ಲಿಸಿದ್ದಾರೆ .






