
ಸಕಲೇಶಪುರ :- ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ದಿನನಿತ್ಯ ಶಾಲಾ ಮಕ್ಕಳಿಗೆ, ವೃದ್ಧರಿಗೆ ಮಹಿಳೆಯರಿಗೆ ಹಾಗೂ ಸಾರ್ವಜನಿಕರು ವಾಹನ ಚಲಾಯಿಸುವಾಗ ವಾಹನ ಸವಾರರಿಗೆ ಬೊಗಳುತ್ತಾ ವಾಹನವನ್ನು ಹಿಭಾಲಿಸುತ್ತ ಓಡುವುದರಿಂದ ವಾಹನ ಸವಾರರು ಕಿರಿ ಕಿರಿ ಅನುಭವಿಸುವಂತಾಗಿದೆ.
ನಾಯಿಗಳನ್ನು ಕೂಡಲೇ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಅಥವಾ ಸಂತಾನಹರಣ ಚಿಕಿತ್ಸೆ ಮಾಡುವ ಮೂಲಕ ನಾಯಿಗಳನ್ನು ನಿಂಯತ್ರಿಸಬೇಕು ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಮೇಶ್ ಪೂಜಾರಿ ಅವರ ನೇತೃತ್ವದಲ್ಲಿ ಬುಧವಾರ ಉಪವಿಭಾಗಾಧಿಕಾರಿ ಡಾ.ಶೃತಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರವಿ ಅಗ್ನಿ, ಬಸವರಾಜ್ ಬೆಳಗೋಡು, ಪೃಥ್ವಿ, ರಾಜೇಶ್, ಸಂತೋ,ಷ್ ಉಮಾರ್ ಲೀನಾ ಆಚಂಗಿ ಉಪಸ್ಥಿತರಿದ್ದರು

